ಹಾಸನ: ಬರಗಾಲದ ನಡುವೆ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದರೂ ಸರ್ಕಾರ ಹೇಮಾವತಿ ಜಲಾಶಯದಿಂದ ತುಮಕೂರಿಗೆ ೨ ಟಿಎಂಸಿ ನೀರು ಹರಿಸುವ ನಿರ್ಧಾರ ಮಾಡಿರುವುದು ರೈತರ ನಡುವೆ ಭೇದವೆಣಿಸುವ ಕ್ರಮವಾಗಿದೆ ಎಂದು ಆರೋಪಿಸಿ ಹಾಸನ ಹಾಗೂ ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಮತ್ತು ರೈತ ಸಂಘದ ಮುಖಂಡರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಚನ್ನರಾಯಪಟ್ಟಣದ ಹೇಮಾವತಿ ನಾಲಾ ವಿಭಾಗದ ಮುಖ್ಯ ಇಂಜಿನಿಯರಿAಗ್ ಕಚೇರಿ ಎದುರು ರೈತ ಸಂಘದಿAದ ಕೆಲಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ತುಮಕೂರಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮತ್ತೊಂದೆಡೆ ತಮ್ಮ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಹಾಸನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲೆಯ ರೈತರÀ ಹಿತ ಕಾಯುವಂತೆ ಮನವಿ ಸಲ್ಲಿಸಿದರು.
ಚನ್ನರಾಯಪಟ್ಟಣ ತಾಲ್ಲೂಕಿನ, ಆಲಗೊಂಡನಹಳ್ಳಿ ಏತನೀರಾವರಿ ಯೋಜನೆಗೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರು, ಬರಗಾಲದಿಂದ ತತ್ತರಿಸಿ ಹೋಗಿರುವ ಹಾಸನ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಿದ ನಂತರ ತುಮಕೂರಿಗೆ ನೀರು ಹಾಯಿಸಬೇಕು ಎಂದು ಆಗ್ರಹಿಸಿದರು.
ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಮೇಲುಸ್ತುವಾರಿ ನೋಡಿಕೊಂಡರು.ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ನ ನುರಾರು ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವAತೆ ಒತ್ತಾಯಿಸಿದರು. ಶಾಸಕರಾದ ಸಿ.ಎನ್.ಬಾಕೃಷ್ಣ, ಎಚ್.ಪಿ.ಸ್ವರೂಪ್, ಮುಖಂಡರಾದ ಎಸ್.ದ್ಯಾವೇಗೌಡ, ಹೊಂದೆರೆ ರಘು ಇತರರು ಭಾಗವಹಿಸಿದ್ದರು.
ದಂಡಿಗನಹಳ್ಳಿ ಹೋಬಳಿ ಆಲಗೊಂಡನಹಳ್ಳಿ ಏತ ನೀರಾವರಿ ಬಳಿ ನಡೆದ ಜೆಡಿಎಸ್ ಪ್ರತಿಭಟನೆ ವೇಳೆ ಮುಖಂಡ ನೆಟ್ಟೆಕೆರೆ ನಾಗರಾಜ್ ಮಾತನಾಡಿ, ನಮ್ಮ ಜಿಲ್ಲೆಯ ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭ ತುಮಕೂರು ಜಿಲ್ಲೆಗೆ ನೀಡು ಹರಿಸುತ್ತಿರುವುದು ಸರ್ಕಾರ ಈ ಜಿಲ್ಲೆಗೆ ಮಾಡುತ್ತಿರುವ ದ್ರೋಹವಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ೨೫ ವರ್ಷಗಳ ಹೋರಾಟದ ಫಲವಾಗಿ ದಂಡಿಗನಹಳ್ಳಿ ಹೋಬಳಿ ಕೆರೆಗಳನ್ನು ತುಂಬಿಸಲು ಆಲಗೊಂಡನಹಳ್ಳಿಯ ನೀರಾವರಿ ಯೋಜನೆ ಸ್ಥಾಪಿಸಲಾಯಿತು. ಈ ಭಾಗದ ೩೬ ಕೆರೆಗಳು ಬೇಸಿಗೆಯಲ್ಲಿ ಖಾಲಿಯಾಗಿದ್ದರೂ ಇದುವರೆಗೂ ಅವರುಗಳನ್ನು ತುಂಬಿಸದೇ ಏಕಾಏಕಿ ತುಮಕೂರಿಗೆ ನೀರು ಬಿಟ್ಟಿರುವುದು ಅನ್ಯಾಯ ಎಂದು ಕಿಡಿ ಕಾರಿದರು.
ಈ ಸಂದರ್ಭ ನೆಟ್ಟÀಕೆರೆ ನಾಗರಾಜ್, ದೊಡ್ಡ ಮತಿಘಟ್ಟ ಮಂಜಣ್ಣ, ಚಿಕ್ಕಮತ್ತಿಘಟ್ಟ ಚಂದ್ರಣ್ಣ, ಗ್ಯಾರಹಳ್ಳಿ ರವೀಶ್, ತರಬೇನಹಳ್ಳಿ ನಂಜುAಡೇಗೌಡ, ವಾರನಹಳ್ಳಿ ರಂಗಸ್ವಾಮಿ, ಹೋನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿಗೌಡ, ಸತೀಶ್ ಇತರರಿದ್ದರು.
ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ:
ಹೇಮಾವತಿ ಜಲಾಶಯದಿಂದ ತುಮಕೂರು ವರೆಗೆ ನಾಲೆಗಳ ಮೂಲಕ ನೀರು ಹಾಯಿಸುತ್ತಿರುವದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆ ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಜಾರಿಗಳಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ. ಆಲಾಶಯದ ಎಡದಂಡೆ ನಾಲೆಯ ಬಲ ಹಾಗೂ ಎಡ ಭಾಗದ ನೂರು ಮಿಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜರಿಗೊಳಿಸಲಾಗಿದ್ದು, ಈ ಕ್ರಮಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ೨೫ ವರ್ಷಗಳ ರಾಜಕೀಯ ಜೀವನದಲ್ಲಿ ೧೪೪ ಸೆಕ್ಷನ್ ಜಾರಿಗಳಿಸಿ ನೀರು ಹರಿಸಿದ್ದನ್ನು ನೋಡಿಲ್ಲ. ನಮ್ಮ ಜಿಲ್ಲೆಯ ಜನರಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.
ಗಡುವು ನೀಡಿದ ರೇವಣ್ಣ: ದಂಗೆ ಏಳುವ ಎಚ್ಚರಿಕೆ
ಎರಡು ಜಿಲ್ಲೆಯ ಜನರ ನಡುವೆ ಭೇದ ಸೃಷ್ಟಿಸಿರುವ ಸರ್ಕಾರ ೨೪ ಗಂಟೆಯೊಳಗೆ ಹಾಸನ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸದೇ ತುಮಕೂರಿಗೆ ನೀರು ಹರಿಸುವುದನ್ನು ಮುಂದುವರಿಸಿದರೆ ದಂಗೆ ಏಳಬೇಕಾಗುತ್ತದೆ. ಮುಂದೆ ಆಗಬಹುದಾದ ಯಾವುದೇ ಅನಾಹುತಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಹೊಣೆಯಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶುಕ್ರವಾರ ಸಂಜೆ ೫ ಗಂಟೆಯೊಳಗೆ ನಮ್ಮ ಜಿಲ್ಲೆಯ ಕೆರೆಗಳಿಗೆ ನೀರು ಬಿಡದಿದ್ದರೆ ಪ್ರತಿ ತೂಬಿನ ಬಳಿ ಐನೂರು ಜನರನ್ನು ನಿಲ್ಲಿಸಿ, ಜೆಸಿಬಿ ಮೂಲಕ ತೂಬಿನಿಂದ ನೀರು ಹರಿಸುತ್ತೇವೆ. ಒಂದು ಕಡೆ ಗೊರೂರು ಡ್ಯಾಂಗೆ ಮುತ್ತಿಗೆ, ಇನ್ನೊಂದು ಕಡೆ ಜಾಕ್ವೆಲ್ ಬಳಿ ಐನೂರು ಜನ ಸೇರಿ ನಾವೇ ನೀರು ಹರಿಸುತ್ತೇವೆ. ಅದು ಯಾರು ಬಂದು ತಡೆಯುತ್ತಾರೋ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು.
ಗಡುವು ಮಿರಿದರೂ ಜಿಲ್ಲಾಡಳಿತ ಹಾಗೂ ಸರ್ಕರ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಜಿಲ್ಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿದರೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ನೇರ ಹೊಣೆ ಹೊರಬೇಕಾಗುತ್ತದೆ. ಹಿಂದೆ ದೊಡ್ಡಹಳ್ಳಿಯಲ್ಲಿ ಗೋಲಿಬಾರ್ ಆಗಿದೆ. ಹೊಳೆನರಸೀಪುರದಲ್ಲಿ ಲಾಠಿಚಾರ್ಜ್ ಆಗಿ ಆಗೀನ ಎಸ್ಪಿಗೆ ಹತ್ತು ವರ್ಷಗಳ ಕಾಲ ಜಾಮೀನು ಸಿಗಲಿಲ್ಲ. ಇಂದಿರಾಗಾAಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಂತೆ ಈಗ ಕಾಂಗ್ರೆಸ್ ಸರ್ಕಾರದವರು ಹಾಸನದಲ್ಲಿ ನೀರಿನ ವಿಚಾರಕ್ಕೆ ಎಮರ್ಜೆನ್ಸಿ ಹೇರಿದ್ದಾರೆ. ಇದು ದುರದೃಷ್ಟಕರ. ಹಶಮಾವತಿ ಜಲಾಶಯ ನಿರ್ಮಾಣಕ್ಕೆ ೪೮ ಹಳ್ಳಿಗಳ ರೈತರು ತಮ್ಮ ಭೂಮಿ ಕಲೆದುಕೊಂಡಿದ್ದಾರೆ. ಹಲವರಿಗೆ ಇನ್ನೂ ಪರಿಹಾರ ಹಣ ಲಭಿಸಿಲ್ಲ. ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯನ್ನೂ ನಡೆಸದೇ, ಈ ಭಾಗದ ಯಾವ ಜನ ಪ್ರತಿನಿಧಿಗಳಿಗೆ ಮಾಹಿತಿಯೇ ನೀಡದೇ ನೀರು ಬಿಟ್ಟಿದ್ದಾರೆ, ಇವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.
ಸಚಿವ ರಾಜಣ್ಣ ನಡೆಗೆ ಗೋಪಾಲಸ್ವಾಮಿ ಅಸಮಾಧಾನ:
ತುಮಕೂರಿಗೆ ನೀರು ಹರಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ. ಜಿಲ್ಲೆಯಲ್ಲಿ ನೀರಿನ ಅಬಾವ ತಲೆದೋರಿರುವ ನಡುವೆ ನಮ್ಮ ಜಿಲ್ಲೆಯ ಜನರ ಹಿತ ಮರೆತು ತುಮಕೂರಿಗೆ ನೀರು ಹರಿಸಲು ಮುಂದಾಗಿರುವುದನ್ನು ಒಪ್ಪಲಾಗದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಜನರಿಗೆ ಅಗತ್ಯವಿರುವ ಕುಡಿಯುವ ನೀರು ಮೀಸಲಿಟ್ಟು, ಈ ಭಾಗದ ಕೆರೆಕಟ್ಟೆಗಳನ್ನು ಕೂಡಲೇ ತುಂಬಿಸಬೇಕು. ರಾಜಣ್ಣ ಅವರು ಮಧುಗಿರಿ ಕ್ಷೇತ್ರದ ಶಾಸಕರು ಮಾತ್ರವಲ್ಲದೇ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ ಎನ್ನುವುದನ್ನು ಮರೆತು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಸನ ಜಿಲ್ಲೆಯ ರೈತರು, ಜನ, ಜಾನುವಾರುಗಳ ಕಾಳಜಿ ಮರೆತು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಕೊಂಡೊಯ್ತಿರುವುದು ಸರಿಯಲ್ಲ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಮಂಜುನಾಥ್. ಮೂರ್ತಿ. ರವೀಶ್. ಸ್ವಾಮಿ. ಮೋಹನ್. ಕುಮಾರ್ ಇತರರಿದ್ದರು.