ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Water Issue) ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೆಂಗಳೂರಿನ ಮನೆ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರನ್ನು ಅನವಶ್ಯಕ ಉದ್ದೇಶಗಳಿಗೆ ಬಳಸಿದವರಿಗೆ BWSSB 5,000 ರೂ ದಂಡವನ್ನು ವಿಧಿಸುತ್ತಿದೆ. ಆದರೆ ಕುಡಿಯುವ ನೀರು ಬಿಟ್ಟು ಇತರೆ ಬಳಕೆಗೆ ನೀರು ಸಿಗುತ್ತಿಲ್ಲ. ನೀರಿನ ಪರ್ಯಾಯ ಮೂಲಗಳಿಲ್ಲದ ಕಾರಣ ನಿವಾಸಿಗಳು ಚಿಂತಿಸುವಂತಾಗಿದೆ. ಮತ್ತು BWSSB ಆದೇಶವನ್ನು ಉಲ್ಲಂಘಿಸಿ 5,000 ರೂ ದಂಡವನ್ನು ಪಾವತಿಸಬೇಕಾಗುವಂತಹ ಪರಿಸ್ಥಿತಿ ಎದುರಾಗುತ್ತಿದೆ. BWSSB ಆದೇಶದ ಪ್ರಕಾರ, ಕುಡಿಯುವ ನೀರನ್ನು ಕಾರುಗಳನ್ನು ತೊಳೆಯುವುದು ಅಥವಾ ಸಸ್ಯಗಳಿಗೆ ನೀರು ಹಾಕುವುದು ಮುಂತಾದ ಅನವಶ್ಯಕ ಉದ್ದೇಶಗಳಿಗೆ ಬಳಸಬಾರದು ಎಂದು ಆದೇಶ ನೀಡಿದೆ
ಬೆಂಗಳೂರಿನ ಹೊರವಲಯದ 110 ಹಳ್ಳಿಗಳು ಹಾಗೂ ಕೇಂದ್ರ ಭಾಗದ ಕೊಳೆಗೇರಿಗಳು ಸೇರಿದಂತೆ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ನೀರು ಪೂರೈಸಲು ಜಲಮಂಡಳಿಯು 582 ಕಡೆ ಸಿಂಟೆಕ್ಸ್ ಟ್ಯಾಂಕ್ಗಳನ್ನು ಸ್ಥಾಪಿಸಿದೆ. ಜನನಿಬಿಡ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ 94 ಮೊಬೈಲ್ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದೆ.