ಬಳ್ಳಾರಿ : ಕಾಂಗ್ರೆಸ್ ಗ್ಯಾರಂಟಿ ಬಂದ ಮೇಲೆ ಮೋದಿ ಗ್ಯಾರಂಟಿ ಬಂದಿರೋದು, ಕಾಂಗ್ರೆಸ್ ಗ್ಯಾರಂಟಿ ಟೀಕೆ ಮಾಡಿದವರೀಗ ಗ್ಯಾರಂಟಿ ಹೆಸರಲ್ಲಿ ಚುನಾವಣೆಗೆ ಮುಂದಾಗಿದ್ದಾರೆ ಬಿಜೆಪಿ ವಿರುದ್ಧ ಸಚಿವ ನಾಗೇಂದ್ರ ವಾಗ್ದಾಳಿ ನಡೆಸಿದರು.
ಪಂಚ ಗ್ಯಾರಂಟಿ ಯಶಸ್ಸಿಯಾಗಿದೆ. ಕರ್ನಾಟಕದ ಗ್ಯಾರಂಟಿಯೇ ದೇಶದಲ್ಲಿ ಮಾಡೆಲ್ ಆಗಿದೆ,ಗ್ಯಾರಂಟಿಯೇ ರಾಜ್ಯದ 28 ಕ್ಷೇತ್ರದಲ್ಲಿ ಗೆಲ್ಲವಂತೆ ಮಾಡೋದ್ರಲ್ಲಿ ಗ್ಯಾರಂಟಿ,ಗೆಲ್ಲುವದೊಂದೇ ಮಾನದಂಡವನ್ನು ಇಟ್ಟುಕೊಂಡು ಟಿಕೆಟ್ ನೀಡಲಾಗ್ತಿದೆಸಚಿವರು ಸ್ಪರ್ಧೆ ಮಾಡೋ ವಿಚಾರ ಸಿಇಸಿ ಸಭೆಯಲ್ಲಿ ಚರ್ಚೆಯಾಗಿಲ್ಲ,ಸಿಇಸಿ ಸಭೆಯಲ್ಲಿ ತೀರ್ಮಾನ ಮಾಡಿ ಸಮರ್ಥ ಅಭ್ಯರ್ಥಿ ಟಿಕೆಟ್ ನೀಡ್ತಾರೆ,
ರಾಜ್ಯದ ಮೇಲೆ ಕೇಂದ್ರ ನಾಯಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ,ಬಳ್ಳಾರಿಯಲ್ಲಿ ನಮ್ಮ ಸಹೋದರ ಕೂಡ ಆಕಾಂಕ್ಷಿ.. ಆದರೆ ಗೆಲ್ಲುವ ಅಭ್ಯರ್ಥಿಯೇ ಮಾನದಂಡ,
ಶ್ರೀರಾಮುಲು ಸೋಲ್ತಾರೆ ಎನ್ನುವ ಜನಾರ್ದನ ರೆಡ್ಡಿ ಹೇಳಿಕೆ ವಿಚಾರ ಬಗ್ಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಒಂದು ಪಕ್ಷದ ನಾಯಕ ಅದು ಅವರ ಅಭಿಪ್ರಾಯ ಆದರೆ ಬಳ್ಳಾರಿಯಲ್ಲಿ ಯಾರೆ ಅಭ್ಯರ್ಥಿಯಾದ್ರೂ ಕಾಂಗ್ರೆಸ್ ಗೆಲ್ಲೋದು ಗ್ಯಾರಂಟಿ ಪಕ್ಷ ಹದಿನೈದು ದಿನಕ್ಕೊಮ್ಮೆ ಸರ್ವೇ ಮಾಡಿ ಟಿಕೆಟ್ ನೀಡ್ತಾರೆ ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲೋದು ಅಷ್ಟೇ ಸತ್ಯ ಎಂದರು.