ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಎಂದು ಗಂಡ ಹೆಂಡತಿಯನ್ನ ಕೊಲೆ ಮಾಡಿ ಪೊಲೀಸ್ ಠಾಣೆಗೆ ಸೆರೆಂಡರ್ ಆಗಿರುವ ಘಟನೆ ನಡೆದಿದೆ..
ಚಿಕ್ಕಬಳ್ಳಾಪುರ ಜಿಲ್ಲೆಯಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸಮೀಪದ ಚೀನಗಾನಪಲ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ ರಾತ್ರಿ ಕಂಠ ಪೂರ್ತಿ ಕುಡಿದ ಗಂಡ ಗಂಗುಲಪ್ಪ. ಸುಖಾ ಸುಮ್ಮನೆ ಗಲಾಟೆ ತೆಗೆದಿದ್ದಾನೆ..ಮನೆಯಲ್ಲಿ ಯಾರು ಇಲ್ಲದ ಕಾರಣ ಮದ್ಯ ರಾತ್ರಿ 12 ಘಂಟೆ ಸಮಯದಲ್ಲಿ ಹಸುಗಳಿಗೆ ಮೇವು ತರಬೇಕು ಬಾ ಎಂದು..
ಮನೆ ಪಕ್ಕ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿ ಕೂಡ ಗಲಾಟೆ ಮಾಡಿ ಚಾಕುವಿನಿಂದ ಚುಚ್ಚಿದ್ದಾನೆ..
ತದನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದಾನೆ..
Bigg Breaking: ಪ್ರತಾಪ್ ಸಿಂಹಾಗೆ ಟಿಕೆಟ್ ಕೈ ತಪ್ಪು ಸಾಧ್ಯತೆ: ಮೈಸೂರಿನಿಂದ ಯದುವೀರ್ ಒಡೆಯರ್ ಸ್ಫರ್ಧೆ?
ಆ ನಂತರ ಶನಿವಾರ ಬೆಳಿಗ್ಗೆ 7 ಘಂಟೆಗೆ ಪಾತಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾನೆ..
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗು ಪಾತಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
ರಾತ್ರಿ ಹಬ್ಬದ ಕಾರಣ ಮಗ, ಮೊಮ್ಮಗ, ಮೊಮ್ಮಗಳು, ಎಲ್ಲರು ಊರಿನಲ್ಲಿ ಡ್ಯಾನ್ಸ್ ಕಾರ್ಯಕ್ರಮದ ಹತ್ತಿರ ತೆರಳಿದ್ದರು ಎಂದು ತಿಳಿದು ಬಂದಿದೆ..
ಮೃತ ಮಹಿಳೆ ಲಕ್ಷ್ಮಿ ನರಸಮ್ಮ 48 ವರ್ಷ ಎಂದು ತಿಳಿದಿದ್ದು..
ಮೃತ ಪಟ್ಟ ಮಹಿಳೆಗೆ ಮಗ, ಮೊಮ್ಮಕ್ಕಳು ಇದ್ದಾರೆ..
ಇವರನ್ನ ಮೃತ ಮಹಿಳೆ ಲಕ್ಷ್ಮಿ ನರಸಮ್ಮ ಸಾಕಿಕೊಂಡು ಇದ್ದರು ಎಂದು ತಿಳಿದು ಬಂದಿದೆ..
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಘಟನೆ.