ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧ 23 ರನ್ಗಳ ಭರ್ಜರಿ ಜಯ ಸಾಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು.
ಆರ್ಸಿಬಿ ನೀಡಿದ್ದ 199 ರನ್ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ಗೆ 20 ಓವರ್ಗಳಲ್ಲಿ 175 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಉತ್ತರಪ್ರದೇಶದ ಪರ ಅಲಿಸ್ಸಾ ಹೀಲಿ 38 ಎಸೆತಗಳಿಗೆ 7 ಫೋರ್ ಹಾಗೂ 3 ಸಿಕ್ಸ್ ಸೇರಿ 55 ರನ್ಗಳಿಸಿದರು. ಕಿರಣ್ ನವಿಗೆರೆ 11 ಎಸೆತಗಳಿಗೆ 18 ರನ್ ಕಲೆಹಾಕಿದರು. ಉಳಿದಂತೆ ಚಾಮರಿ ಅಥಾಪತ್ತು 8, ಗ್ರೇಸ್ ಹ್ಯಾರೀಸ್ 5, ಶ್ವೇತಾ ಶೆರಾವತ್ 1, ದೀಪ್ತಿ ಶರ್ಮಾ 33, ಪೂನಮ್ ಕೆಮ್ನಾರ್ 31, ಸೋಫಿ ಎಕ್ಲೆಸ್ಟೋನ್ 4 ಹಾಗೂ ಅಂಜಲಿ ಸರ್ವಾಣಿ 3 ರನ್ ಗಳಿಸಿದರು.
ಆರ್ಸಿಬಿ ಪರ ಬ್ಯಾಟ್ ಬೀಸಿದ್ದ ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್ಸಿಬಿ ನಿಗದಿತ ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿತ್ತು. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199 ರನ್ಗಳ ಬೃಹತ್ ಮೊತ್ತದ ಗುರಿ ನೀಡಿತ್ತು