ಕೊಪ್ಪಳ:- ಕನಕಗಿರಿ ಉತ್ಸವವನ್ನು ಕನಕಗಿರಿಯಲ್ಲಿ ಸಿ ಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು, ಕನಕಗಿರಿ ಉತ್ಸವವನ್ನ ಸಂತೋಷದಿಂದ ಉದ್ಘಾಟನೆ ಮಾಡಿದ್ದೆನೆ. 2010 ರಲ್ಲಿ ಈ ಉತ್ಸವವನ್ನ ಶಿವರಾಜ ತಂಗಡಗಿ ಅವರು ಪ್ರಾರಂಭಿಸಿದ್ರು. ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಕನಕಗಿರಿ ಕೂಡಾ ಒಂದಿ. ಇಲ್ಲಿನ ಇತಿಹಾಸ ಕಲೆ ಸಾಹಿತ್ಯ ಸಂಸ್ಕೃತಿಯನ್ನ ಜನರಿಗರ ತಿಳಿಸಬೇಕಿದೆ. ಇದು ದೇಶದ ಭವಿಷ್ಯ ರೂಪಿಸಲು ಸಾದ್ಯ,. ಬಾಬಾಸಾಹೇಬರು ಹೇಳಿದಂತೆ ಇತಿಹಾದ ತಿಳಿದವರಿಗೆ ಮಾತ್ರ ಭವಿಷ್ಯ ರೂಪಿಸಲು ಸಾದ್ಯ
ಇಂದಿನ ಯುವ ಪೀಳಿಗೆಯ ಇತಿಹಾಸ ತಿಳಿಕೊಳ್ಳಬೇಕಿದೆ. ಪ್ರತಿಯೊಬ್ಬರು ನಮ್ಮ ಜೀವನದ ಹಾದಿಯನ್ನ ನೋಡಬೇಕು. ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನ, ಅಸಮಾನತೆಯನ್ನ ಹೋಗಲಾಡಿಸಿದ ಹಿನ್ನೆಲೆ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೆವೆ. ಮನುವಾದದಲ್ಲಿ ಜಾತಿ ಜಾತಿಗಳನ್ನ ಜೋಡಿಸಿದ್ದಾರೆ, ಜರ್ಮನಿಯಲ್ಲಿ ಹಿಟ್ಲರ್ ಮತ್ತು ಮುಸಲೋನಿ ಮಾಡಿದ್ದು ಇದೆ ಕೆಲಸ. ಮುಸಲೋನಿ ಮತ್ತು ಹಿಟ್ಲರ್ ನ್ನ ಪಾಲೋ ಮಾಢೋರು ನಮ್ಮ ದೇಶದಲ್ಲಿದ್ದಾರೆ. ಜರ್ಮನ್ ರು ಶ್ರೇಷ್ಟರು ಎಂದು 68 ಲಕ್ಷ ಯಹೂದಿಗಳನ್ನ ಕೊಂದು ಹಾಕಿದ. ಕೊನೆಗೆ ತಾನೆ ಗುಂಡು ಹಾರಿಸಿಲೊಂಡು ಸತ್ತೊದ, ಈ ರೀತಿ ನಮ್ಮ ದೇಶದಲ್ಲಿ ಆಗಬಾರದು. ನಮ್ಮಲ್ಲಿ ಯಾರು ಶ್ರೇಷ್ಟರು ಕನಿಷ್ಠರು ಇಲ್ಲ, ಶ್ರೇಷ್ಠ ಕನಿಷ್ಠ ಅನ್ನೋರು ಮನುಷ್ಯರೆ ಅಲ್ಲ, ಇದನ್ನೆ ಬಸವಣ್ಣನವರು ಹೇಳಿದ್ದು. ಮನುಷ್ಯ ಮನುಷ್ಯರನ್ನ ಪ್ರೀತಿಸಬೇಕು, ದ್ವೇಷಿಸಬಾರದು. ಯಾವುದೆ ಜಾತಿ ದರ್ಮಕ್ಕೆ ಸೇರಿರಲಿ, ಅವರನ್ನ ಪ್ರೀತಿಸುವ ಕೆಲಸ ಮಾಡಬೇಕಿದೆ.
ಇದೆಲ್ಲವನ್ನೂ ನಾವು ಇತಿಹಾಸದಿಂದ ತಿಳಿದುಕೊಳ್ಳಬೇಕಿದೆ. ಅಂಜನಾದ್ರಿಯಲ್ಲಿ ಹನುಮ ಹುಟ್ಟಿದ್ದು ಅಂತಾರೆ ಅದರ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದಿವಿ. ನಾವು ಶ್ರೀರಾಮನನ್ನ ಅಷ್ಟೆ ಪೂಜಿಸಲ್ಲ, ಹನುಮನನ್ನೂ ಪೂಜಿಸ್ತಿವಿ. ಶ್ರೀರಾಮಚಂದ್ರ ನ್ನ ಪ್ರತ್ಯೇಕವಾಗಿ ನೋಡೊದು ಸರಿಯಲ್ಲ, ನಾನು ಸೀತಾರಾಮ್ ಜೈ ಅಂತೀನಿ, ಬರಿ ಶ್ರೀರಾಮ ಜೈ ಅನ್ನಲ್ಲ. ನಾನು, ರಾಮ ಲಕ್ಷ್ಮಣ, ಸೀತೆ ಹನುಮಂತನ್ನ ಒಟ್ಟಿಗೆ ನೋಡ್ತಿವಿ. ನಾವು ಅವಿಭಕ್ತ ಕುಟುಂಭದಿಂದ ಬಂದವರು, ಬಾವು ಎಲ್ಲರನ್ನೂ ಒಟ್ಟಿಗೆ ನೋಡೋರು. ಯಾವುದಾದ್ರು ದೇವಸ್ಥಾನದಲ್ಲಿ ಶ್ರೀರಾಮ ಚಂದ್ರ ಇರೋದು ನೋಡೊದ್ದಿರಾ,..? ನಾನಂತು ನೋಡಿಲ್ಲ. ನಾನು ರಾಮಾಯಣ ಮಹಾಭಾರತ ಓದ್ಕೊಂಡಿದಿನಿ.
ರಾಮನ ಜೊತೆ ಲಕ್ಷ್ಮಣ ಸೀತೆ ಎಲ್ಲರು ಒಟ್ಟಿಗೆ ಕಾಡಿಗೆ ಹೋದ್ರು ಅವರನ್ನ ಹೇಗೆ ಬೇರ್ಪಡಿಸೋಕೆ ಆಗತ್ತೆ. ನಾವು ಪುರಾಣಗಳನ್ನ ಓದಿ ಅರ್ಥ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಸರಿ ದಾರಿಲಿ ನಡಿಯೋಕೆ ಆಗತ್ತೆ. ಬಸವಣ್ಣನವರು ಕಾಯಕವೆ ಕೈಲಾಸ ಎಂದು ಹೇಳಿದ್ದಾರೆ. ಇತಿಹಾಸ ತಿಳಿದುಕೊಳ್ಳಲು ಇಂತಹ ಉತ್ಸಹ ಮಾಡುತ್ತೇವೆ. ಎಲ್ಲಾ ಗತವೈಭವಗಳು ಗೊತ್ತಾಗಬೇಕು ಅಲ್ಲವೆ. ಒಂದು ಕಾಲದಲ್ಲಿ ಮಹಿಳೆಯರಿಗೆ ಅವಕಾಶ ಇರಲಿಲ್ಲ, ಇವತ್ತು ಸಂವಿದಾನ ಬಂದ ಮೇಲೆ ಎಲ್ಲಾ ಅವಕಾಶ ಸಿಕ್ಕಿದೆ. ಅಕ್ಕಮಹಾದೇವಿ ಮಹಿಳಾ ಕಾಲೇಜಿಗೆ ಹೆಸರಿಟ್ಟವರು ಸಿದ್ದರಾಮಯ್ಯ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪೋಟೊಇಡಲು ಆದೇಶ ಮಾಡಿದ್ದು ಸಿದ್ದರಾಮಯ್ಯ. ಇವೆಲ್ಲ ಇತಿಹಾಸ ಜನರಿಗೆ ಗೊತ್ತಾಗಬೇಕು. ಕೊಪ್ಪಳ ಜಿಲ್ಲೆಗೆ ಹಲವು ಯೋಜನೆಗಳನ್ನ ಕೊಟ್ಟಿದ್ದೆವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.