ಗದಗ: ಸ್ಟ್ಯಾಂಪ್ ಪೇಪರ್ ದರ 25, 30, 40 ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ, 40 ವರ್ಷ ಹಿಂದೆ ಇದ್ದ ದರಗಳೇ ಮುಂದುವರೆದುಕೊಂಡು ಬಂದಿತ್ತು. ಅಂತಹವುಗಳನ್ನು ನಾವು ಪರಿಷ್ಕರಣೆ ಮಾಡಿದ್ದೇವೆ ಎಂದು ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ. ಅಕ್ಕ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂದ್ರ, ತಮುಳಿನಾಡು ರಾಜ್ಯಗಳಲ್ಲಿರೋ ಸ್ಟ್ಯಾಂಪ್ ಪೇಪರ್ ದರ ನೋಡಿ ಅದಕ್ಕೆ ಸಮಾನ ಅಥವಾ ಅದಕ್ಕಿಂತ ಕಡಿಮೆ ಇರೋ ರೀತಿ ಪರಿಷ್ಕರಣೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗಿಂತ ಹೆಚ್ಚು ಮಾಡಿಲ್ಲ, ಪುನರ್ ವಿಮರ್ಶೆ ಮಾಡಬೇಕು ಅಂದ್ರೆ ಖಂಡಿತವಾಗಿ ಪುನರ್ ವಿಮರ್ಶೆ ಮಾಡ್ತೇವೆ. ಎಲ್ಲಾ ಮಾಹಿತಿ ಕಲೆ ಹಾಕಿ ಒಂದು ತೀರ್ಮಾನ ತಗೋತೇವೆ ಎಂದು ಹೇಳಿದರು.
ಇನ್ನೂ ಬೆಳೆ ಹಾನಿ ಬರ ಪರಿಹಾರ ನೀಡುವಲ್ಲಿ ಕೇಂದ್ರದ ಧೋರಣೆ ವಿಚಾರಕ್ಕೆ ಪರಿಹಾರ ಕೊಡೋ ಉದ್ದೇಶದಿಂದ ರಾಜ್ಯಕ್ಕೆ ಬರಬೇಕು ಅಂತಾ ಸೆ. 23 ರಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈಗಾಗಲೇ ಆರು ತಿಂಗಳಾಗಿದೆ. ಸಿಎಂ, ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ನಾನು ಕೇಂದ್ರದಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳನ್ನ ಭೇಟಿ ಮಾಡಿದ್ದೇವೆ. ಡಿ. 19 ರಂದು ನಾನು ಮತ್ತು ಸಿಎಂ ಪ್ರಧಾನಿಗಳನ್ನ ಭೇಟಿ ಆಗಿದ್ದೇವೆ. ಡಿ. 20 ರಂದು ಗೃಹ ಸಚಿವರನ್ನ ಭೇಟಿ ಆಗಿದ್ದೇವೆ. ಬರ ಪರಿಹಾರ ಕೊಡಲು ಒತ್ತಾಯಪೂರ್ವಕ ಮನವಿ ಮಾಡಿದ್ದೇವೆ ಎಂದರು.
ಇಷ್ಟು ದಿನ ಕಳೆದರೂ ಅವರು ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ರೈತರ ತೊಂದರೆ ಮನಗಂಡು ರಾಜ್ಯ ಸರ್ಕಾರವೇ 34 ಲಕ್ಷ ರೈತರ ಖಾತೆಗಳಿಗೆ 2ಸಾವಿರ ರೂಪಾಯಿಯಂತೆ ಜಮಾ ಮಾಡಿದ್ದೇವೆ. ಈ ಹಿಂದೆ ಬರಗಾಲದಲ್ಲಿ ಯಾವ ಸರ್ಕಾರವೂ ಕೂಡಾ ಮೊದಲ ಹಂತದಲ್ಲಿ ಪರಿಹಾರ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ, ಕೇಂದ್ರ ಮಾಡೋ ಕೆಲಸವನ್ನು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಪರಿಹಾರ ಬಿಡುಗಡೆ ಮಾಡಿದೆ. ರೈತರಿಗೆ ಅನ್ಯಾಯ ಆಗ್ತಿದೆ ಆಂತಾ ದೆಹಲಿಯಲ್ಲಿ ಎಲ್ಲರೂ ಹೋಗಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇವೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಮಾಡೋ ಅನ್ಯಾಯ ಎಂದು ಹೇಳಿದರು.