ಕೋಲಾರ: ಸಿದ್ದರಾಮಯ್ಯ ಅವರು ಜಯಪ್ರಕಾಶ್ ವರದಿ ಸ್ವೀಕಾರ ಹಿನ್ನೆಲೆ ಕಾಂಗ್ರೆಸ್ ಪಕ್ಷದವರಿಗೆ ಅದರ ವಿರುದ್ದ ಅಪಸ್ವರ ಇದೆ ಶಾಮನೂರು ಶಿವಶಂಕರಪ್ಪ ಅವರೇ ಅವೈಜ್ಙಾನಿಕ ಎಂದು ಹೇಳಿದ್ದಾರೆ ಎಂದು ಸಂಸದ ಎಸ್ ಮುನಿಸ್ವಾಮಿ ಅವ್ರು ಹೇಳಿದ್ರು. ಇಂದು ಕೋಲಾರದ ನಗರದಲ್ಲಿ ಮಾತನಾಡಿದ ಅವ್ರು, ಏಕವ್ಯಕ್ತಿ ನಿರ್ಧಾರವನ್ನು ಸಿದ್ದರಾಮಯ್ಯ ಅವ್ರು ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಆರೋಪಕ್ಕೆ ಪ್ರತಿಕ್ರಿಯೆ
ಪಾಕಿಸ್ತಾನ ಜಿಂದಾಬಾದ್ ಎಂಬ ಆರೋಪಕ್ಕೆ ಪ್ರತಿಕ್ರಿಸಿದ ಅವ್ರು ಸಿದ್ದರಾಮಯ್ಯ ಡಿಕೆಶಿ ಅವರಿಗೆ ದೇಶದ ಮೇಲೆ ಅಭಿಮಾನ ಇದ್ದರೆ ನಾಸೀರ್ ಅವರಿಂದ ರಾಜೀನಾಮೆ ಪಡೆಯಲಿ ಘೋಷಣೆ ಕೂಗಿದವರನ್ನಹ ಬಂಧಿಸಿ ದೇಶದ್ರೋಹ ಚಟುವಟಿಕೆಯಡಿ ಕ್ರಮಕೈಗೊಳ್ಳಲಿ.ದೇಶದ ವಿರುದ್ದ ಧರ್ಮದ ವಿರುದ್ದ ಮಾತನಾಡುವವರ ಪರವಾಗಿ ಸಿದ್ದರಾಮಯ್ಯ ಇದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ತೀರ್ಮಾನಿಸಿದ್ದಾರೆ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ಪರವಾಗಿ ಜರನರು ಇದ್ದಾರೆ ನಮ್ಮಲ್ಲಿ ಯಾರೇ ಅಭ್ಯರ್ಥಿ ಆದರು ಮೋದಿಯವರೆ ನಮ್ಮ ಅಭ್ಯರ್ಥಿ ಅನ್ನುವ ನಿಟ್ಟಿನಲ್ಲಿ ಈ ದೇಶಕ್ಕೆ ನರೇಂದ್ರ ಮೋದಿಯವರು ಅವಶ್ಯಕ ಎಂದು ಮತ ಚಲಾಯಿಸಿ ಮೂರನೇ ಬಾರಿ ಅವರನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ರು