ಕಲಬುರ್ಗಿ:- ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಮುಖಂಡನನ್ನ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಅಳಂದ ತಾಲೂಕಿನ ಸರಸಂಬಾ ಬಳಿ ಘಟನೆ ನಡೆದಿದ್ದು ಮಹಾಂತಪ್ಪ ಎಂಬಾತನೇ ಹತ್ಯೆಯಾದ ದುರ್ದೈವಿ..
ಗಂಭೀರ ಗಾಯಗಳಿಂದ ಬಳಲುತಿದ್ದ ಮಹಾಂತಪ್ಪನನ್ನ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಅಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ..