ರಾಮನಗರ:- ಜಾತಿ ಗಣತಿ ವರದಿಯಲ್ಲಿ ಕೆಲವು ದೋಷಗಳಿವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ಹೊರ ಹಾಕಿದ್ದಾರೆ.
ಜಾತಿಗಣತಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಈ ಜಾತಿ ಗಣತಿ ಮಾಡಲಾಗುತ್ತಿದೆ. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ. ನಾಲ್ಕು ಜನರ ಮನೆಗೆ ಹೋಗಿದ್ರೆ, ಇನ್ನೂ ಕೆಲವರ ಮನೆಗೆ ಹೋಗಿ ಗಣತಿ ಮಾಡಿಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಜಾತಿ ಗಣತಿಯಲ್ಲಿ ಕೆಲ ಗೊಂದಲಗಳಿವೆ ಎಂದರು.
ನಮ್ಮ ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿವೆ. 103 ಉಪ ಪಂಗಡಗಳಿರುವುದರಿಂದ ನಮ್ಮ ಸಮುದಾಯದ ಕೂಲಂಕುಷ ಅಧ್ಯಯನ ಮಾಡಬೇಕು. ಬಳಿಕ ವೈಜ್ಞಾನಿಕ ಗಣತಿ ಮಾಡಬೇಕು. ಆಮೇಲೆ ಸ್ವಲ್ಪ ಸಮಯ ತೆಗೆದುಕೊಂಡು ಸ್ವೀಕಾರ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಇದರಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.