ಬಳ್ಳಾರಿ:- ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ 49 ನೇ ಹುಟ್ಟು ಹಬ್ಬವನ್ನು ನೂತನ ಜಿಲ್ಲೆ ವಿಜಯನಗರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಪೂರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ.
ನಗರದ ತುಂಬಾ ರಾರಾಜಿಸುತ್ತಿರುವ ಅಂಬೇಡ್ಕರ್, ಬಸವೇಶ್ವರ ಮತ್ತು ಸಂತೋಷ್ ಲಾಡ್ ಅವರ ಬ್ಯಾನರ್ಳು. ಹುಟ್ಟುಹಬ್ಬಕ್ಕೆ ಸುಮಾರು 3 ದಿನಗಳಿಂದ ಪೂರ್ವ ತಯಾರಿಯನ್ನು ಕೈಗೊಂಡಿದ್ದು,ಈ ಕಾರ್ಯಕ್ರಮದ ಮೂಲಕ ಬುದ್ದ, ಬಸವ, ಅಂಬೇಡ್ಕರ್ ಅವರ ಆಶಾಯವನ್ನು ತಿಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷದವರಗೆ ಜನರು ಸೇರಬಹುದು ಹಾಗೂ ಪಕ್ಷಾತೀತವಾಗಿ ನಿರ್ವಹಿಸುವ ಜವಬ್ದಾರಿಯನ್ನು ಸಂತೋಷ ಲಾಡ್ ಫೌಂಡೇಷನ್ ವಹಿಸಿಕೊಂಡಿದೆ. ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ವಿಜೃಂಭಣೆಯಿಂದ ಅರ್ಥ ಪೂರ್ಣ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಹುಟ್ಟು ಹಬ್ಬದ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಮುಂದಾಳತ್ವದಲ್ಲಿ ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕನ್ಹಯ್ಯ ಕುಮಾರ ಭಾಷಣ ಮಾಡುತ್ತಾ ಸಂತೋಷ ಲಾಡ್ ಗೆ ಹುಟ್ಟು ಹಬ್ಬದ ಶುಭಾಷಯ ತಿಳಿಸಿದರು.
ಜೊತೆಗೆ ನಿಮ್ಮ ಹೋರಾಟ ನಿರಂತರವಾಗಿರಲಿ ಎಂದ ಕನ್ಹಯ್ಯ ಕುಮಾರ ಶುಭ ಕೋರಿದರು. ಭಾರತ್ ಜೋಡೋ ಯಾತ್ರೆ ವೇಳೆ ಬಂದಿದ್ದೇ ಇದೀಗ ಮತ್ತೊಮ್ಮೆ ಇಲ್ಲಿಗೆ ಬಂದಿರುವೆ.. ಹಂಪಿಯ ನೋಡುವ ಆಸೆಯಿಂದ ಇಲ್ಲಿಗೆ ಬಂದಿರುವೆ. ವಿಜಯನಗರ ಸಾಮ್ರಾಜ್ಯದ ಗುಣಗಾನ ಮಾಡಿದ್ದಾರೆ. ಬಸವಣ್ಣ ಮತ್ತು ಅಂಬೇಡ್ಕರ್ ಅವರ ಜೊತೆಗೆ ಯಾವ ನಾಯಕ ರಿಗೂ ಜಯಕಾರ ಹಾಕಬೇಡಿ.. ಅವರ ಹಂತಕ್ಕೆ ನವ್ಯಾರು ತಲುಪಲು ಸಾಧ್ಯವಿಲ್ಲ. ಗಾಂಧಿಜೀ ಅಂಬೇಡ್ಕರ್ ಅವರನ್ನು ಒಪ್ಪುವದಿಲ್ಲ ಆದ್ರೇ ಸಮಯ ಸಿಕ್ಕಾಗ ಅವರನ್ನು ಬಳಸುತ್ತಾರೆ.. ಬಸವಣ್ಣ, ಸೇರಿದಂತೆ ನೆಹರು ವಲ್ಲಭಭಾಯಿ ಪಾಟೀಲ, ಯಾರನ್ನು ಒಪ್ಪಲ್ಲ ಅವಕಾಶ ಸಿಕ್ಕಾಗ ಎಲ್ಲರ ಹೆಸರನ್ನು ಬಳಸ್ತಾರೆ..ಬ್ರಿಟಿಷರಂತೆ ಭಾವನೆಗಳ ಮೇಲೆ ಅಂತರೀಕ ಜಗಳ ಮಾಡುವ ಮೂಲಕ ರಾಜಕೀಯ ಮಾಡ್ತಿದ್ದಾರೆ. ಇತಿಹಾಸದ ವಿಚಾರ ಮುಂದಿಟ್ಟು ಕೊಂಡು ಜಗಳವಾಡಿಸಿ ಮುಂದಿನ ಭವಿಷ್ಯ ಕತ್ತಲು ಮಾಡ್ತಿದ್ದಾರೆ. ಯಾವ ಧರ್ಮವು ಅಸಮಾನತೆ, ವಿರೋಧ, ತಾರತಮ್ಯ ಮಾಡಲ್ಲ ಮಾಡಿದ್ರೇ ಅದು ಧರ್ಮವೇ ಅಲ್ಲ..ಪ್ರೀತಿ, ಪ್ರೇಮ, ಸ್ನೇಹ ಎಲ್ಲರುತ್ತದೆ ಯೋ ಅಲ್ಲಿ ಅಂಬೇಡ್ಕರ್, ಬಸವಣ್ಣ ಸೇರಿದಂತೆ ಗಾಂಧಿಯೂ ಅಲ್ಲಿರುತ್ತಾರೆ.. ಭಾರತದ ಸಂವಿಧಾನ ನಾವೇಲ್ಲರೋ ಒಂದೇ ಎನ್ನುತ್ತದೆ. ಸಂವಿಧಾನ ಯಾವತ್ತು ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಭಾಗ ಮಾಡುವುದಿಲ್ಲ.. ನಾವೆಲ್ಲರೂ ಭಾರತೀಯರು.. ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ ಹೋರಾಟದ ಬಳಿಕ ಸಿಕ್ಕಿದೆ. ಸಂವಿಧಾನ ಎಲ್ಲರಿಗೂ ಮತದಾನದ ಅವಕಾಶ ನೀಡಿದೆ. ಬಡವ ಶ್ರೀಮಂತ ಎನ್ನುವ ಬೇದಭಾವ ಇಲ್ಲದೇ ಸಂವಿಧಾನ ಎಲ್ಲರಿಗೂ ಒಂದು ಮತದ ಅವಕಾಶ ನೀಡಿದೆ. ಶಾಲೆ, ದೇಗುಲ, ಆಸ್ಪತ್ರೆ ಎಲ್ಲರೂ ಎಲ್ಲಡೆ ಹೋಗಲು ಸಂವಿಧಾನ ಅವಕಾಶ ನೀಡಿದೆ. ವೈಚಾರಿಕ ಸಂಘರ್ಷ ದೇಶದಲ್ಲಿ ನಡೆಯುತ್ತಿದೆ. ಹಿಂದೆ ಬ್ರಿಟಿಷರು ಕಡಿಮೆ ಸಂಖ್ಯೆ ಇದ್ರೂ ಭಾರತದಲ್ಲಿ ಹೆಚ್ಚು ಜನರಿದ್ರು ನಮ್ಮನ್ನು ಒಡೆದಾಡೋ ನೀತಿಯಿಂದ ನಮ್ಮನ್ನಾಳಿದ್ರು.. ಸಂವಿಧಾನ ಉಳಿಸಲು ಪ್ರತಿಯೊಬ್ಬರು ಹೋರಟ ಮಾಡಬೇಕಿದೆ ಎಂದರು.