ಬೆಂಗಳೂರು: ಎಚ್ಡಿ ಕುಮಾರಸ್ವಾಮಿ ಏನು ಸಾಚಾನಾ? ಅವರು ಅವಕಾಶವಾದಿ ಅಲ್ವಾ..? ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರು HDK ವಿರುದ್ಧ ಕಿಡಿ ಕಾರಿದ್ದಾರೆ
Rajyasabha Election: ಕಾಂಗ್ರೆಸ್ ಪರ ಎಸ್.ಟಿ.ಸೋಮಶೇಖರ್ ಮತ: ಬಿಜೆಪಿಯಿಂದಲೇ ಉಚ್ಛಾಟಿಸುವ ಸಾಧ್ಯತೆ
ರಾಜ್ಯಸಭಾ ಚುನಾವಣೆಗೂ ಮೊದಲು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಬಾರಿ ಆತ್ಮಸಾಕ್ಷಿಯಂತೆ ಮತ ಹಾಕುತ್ತೇನೆ. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಏನು ಸಾಚಾನಾ? ಅವರು ಅವಕಾಶವಾದಿ ಅಲ್ವಾ? ಇವರನ್ನು ಮುಖ್ಯಮಂತ್ರಿ ಮಾಡಿರಲಿಲ್ವಾ? ಸಿಎಂ ಆದ್ಮೇಲೆ ಒಂದು, ಆಮೇಲೆ ಒಂದಾ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದರು.
Bigg News: ರಾಜ್ಯಸಭಾ ಚುನಾವಣೆ: ಪರೋಕ್ಷವಾಗಿ ಸೋಲು ಒಪ್ಪಿಕೊಂಡ್ರಾ ಹೆಚ್ ಡಿಕೆ…?
ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡ್ತಾರೆ ಅವರಿಗೆ ನನ್ನ ಮತ ಕೊಡುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನೆ. ನನ್ನ ಕ್ಷೇತ್ರಕ್ಕೆ ಸರ್ಕಾರಿ ಶಾಲೆಗೆ ಯಾರು ಅನುದಾನ ಕೊಡ್ತಾರೆ ಅವರಿಗೆ ಮತ ನೀಡುತ್ತೇನೆ. 5-6 ಸಾರಿ ರಾಜ್ಯಸಭೆಗೆ ಅವರು ಹೇಳಿದಂತೆ ಹಾಕಿದ್ದೀನಿ. ಪಕ್ಷ ಹೇಳಿದಂತೆ ಕೇಳಿದ್ದೇನೆ. ಸಿಎಂ ಸ್ಥಾನಕ್ಕಾಗಿ ಅವರು ಅವಕಾಶವಾದಿಗಳಲ್ವಾ ಎಂದು ಹೆಚ್ಡಿಕೆಗೆ ಟಾಂಗ್ ಕೊಟ್ಟರು.