ಚಿತ್ರದುರ್ಗ: ಬೇಸಿಗೆಯ ಆರಂಭದಲ್ಲಿಯೇ ಬರದ ನಾಡು ಕೋಟೆ ನಾಡು ಚಿತ್ರದುರ್ಗದಲ್ಲಿ ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಕ್ಷೇತ್ರದಲ್ಲಿ ಕುಡಿವ ನೀರಿಗಾಗಿ ಆಹಾಕಾರ ಎದ್ದಿದೆ.ಡಿ.ಸುಧಾಕರ್ ಅವರ ಸ್ವಕ್ಷೇತ್ರ ಹಿರಿಯೂರಿನ ದಿಂಡಾವರ ಗ್ರಾಮದಲ್ಲಿಕುಡಿಯುವನೀರಿನ ಸಮಸ್ಯೆಯಾಗಿದ್ದು, ಕಳೆದ ಒಂದು ವಾರದಿಂದ ಕುಡಿವ ನೀರು ಬಿಟ್ಟಿಲ್ಲ.
ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಿರಿ, ಬೊಜ್ಜು ಕರಗಿಸಿಕೊಳ್ಳಿ!
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸಿಲ್ಲ ಈ ಕೂಡಲೇ ಕುಡಿವ ನೀರಿನ ಸಮಸ್ಯೆಯನ್ನು ಸಚಿವ ಸುಧಾಕರ್ ಬಗೆಹರಿಸಬೇಕೆಂದು ಆಗ್ರಹಿಸಿದರು.