ವಿಜಯನಗರ: ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ್ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಆಗಮಿಸುತ್ತಾರೆ.ರಾಜ್ಯದ ಮಳೆ ಬೆಳೆ ಹಾಗೂ ರಾಷ್ಟ್ರ ,ರಾಜ್ಯ ರಾಜಕೀಯವನ್ನು ಕೂಡಾ ಇದೇ ಕಾರ್ಣೀಕದ ಮೇಲೆ ವಿಶ್ಲೇಷಿಸಲಾಗುತ್ತೆ.ಈ ವರ್ಷದ ಕಾರ್ಣೀಕವೂ ಕೂಡಾ ಭಕ್ತರ ಪಾಲಿಗೆ ಕೊಂಚ ನಿರಾಳತೆ ಉಂಟು ಮಾಡಿದೆ. ಕಿಕ್ಕಿರಿದು ಸೇರಿರೋ ಜನರ ದಂಡು. ಮೊಳಗಿರೋ ಡಮರುಗದ ಸದ್ದು.ಲಕ್ಷಾಂತರ ಭಕ್ತರ ಹೃದಯದಲ್ಲಿ ಏಳುಕೋಟಿ ಏಳುಕೋಟಿ ಚಾಂಗಮಲೋ ಚಾಂಗಮಲೋ ಅನ್ನೋ ಜಯಘೋಷ ಮೊಳಗಿತ್ತು.
ಮೆರವಣಿಗೆ ಮೂಲಕ ಬಂದ ಗೊರವಪ್ಪಜ್ಜ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಲಕ್ಷಾಂತರ ಜನರೆಲ್ಲಾ ಮೌನ. ಇದೇ ಹೊತ್ತಲ್ಲಿ ಗೊರವಯ್ಯ ರಾಮಪ್ಪ ಕಾರ್ಣೀಕ ನುಡಿದರು. ಹೌದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಕಂಡುಬಂದ ದೃಶ್ಯಗಳಿವು. ಮೈಲಾರಲಿಂಗೇಶ್ವರ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸುಮಾರು ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಪ್ರತಿವರ್ಷ ಭರತ್ ಹುಣ್ಣುಮೆಯಾದ ಮೂರು ದಿನಕ್ಕೆ ವರ್ಷದ ದೈವವಾಣಿಯನ್ನ ನುಡಿಯಲಾಗುತ್ತಿದೆ.
Health Benefits of Lotus seeds: ತಾವರೆ ಬೀಜಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?
ಮೈಲಾರದ ಡೆಂಕನಮರಡಿ ಎಂಬಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರು ಒಂದೇ ಶಬ್ದ ಮಾಡದೇ ಮೌನ ತಾಳಿದರು. ಗೊರವಯ್ಯ ರಾಮಪ್ಪ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬಿದ್ದರು.ಕೂಡಲೇ ನೆರೆದ ಭಕ್ತರು ಗೊರವಯ್ಯ ರಾಮಪ್ಪಜ್ಜನನ್ನು ಹಿಡಿದುಕೊಂಡರು. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ 15 ಅಡಿ ಗೊರವಯ್ಯ ಸದ್ದಲೇ ಅನ್ನುತಾ” ಸಂಪಾಗಿತಲೇ ಪರಾಕ್ ” ಅನ್ನೋ ದೈವವಾಣಿ ನುಡಿದ್ದಾನೆ.
ಸಂಪಾಗಿತಲೇ ಅನ್ನೋ ದೈವವಾಣಿಯನ್ನ ಈ ಭಾರಿ ರೈತರಿಗೆ ಹಾಗೂ ದೇಶಕ್ಕೆ ಮಳೆ-ಬೆಳೆ ಸಮೃದ್ದವಾಗಲಿದೆ. ಈ ಬಾರಿಯ ಬರಗಾಲಕ್ಕೆ ಜನರು ತತ್ತರಿ ಹೋಗಿದ್ದಾರೆ. ರಾಜ್ಯಕ್ಕೆ ಉತ್ತಮ ಮಳೆಬೆಳೆಯಾಗಲಿದೆ.. ವರ್ಷದ ಭವಿಷ್ಯವಾಣಿ ಅಂತಲೆ ನಂಬಿಕೊಂಡು ಬಂದಿರೋ ಕಾರ್ಣಿಕವಾಣಿ ಕೇಳಲು ಕೇವಲ ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ಸಾವಿರಾರು ಜನರು ಆಗಮಿಸಿರ್ತಾರೆ. ಸಂಜೆಯಾಗುತ್ತಿದ್ದಂತೆ ಕಾರ್ಣಿಕ ನುಡಿಯೋ ಡೆಂಕನಮರಡಿಗೆ ಸ್ಥಳ ಜನರಿಂದ ತುಂಬಿ ಬಿಡುತ್ತದೆ.
ಸುಮಾರು ವರ್ಷಗಳಿಂದ ರೈತರು ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ಕೇಳಿ ಮಳೆ ಬೆಳೆ ನಿರ್ಧರಿಸುತ್ತಾರೆ. ಈ ವರ್ಷ ರಾಜ್ಯದಲ್ಲಿ ಬೀಕರ ಬರಗಾಲ ಆವರಿಸಿದೆ. ಅದರೆ ಈ ಬಾರಿ ದೈವವಾಣಿಯು ಸಂಪಾಯಿತಲೇ ಪರಾಕ್ ಅನ್ನೋ ವಾಣಿಯಿಂದ ರಾಜ್ಯ ಮತ್ತು ದೇಶದಲ್ಲಿ ಮಳೆ ಹಾಗೂ ಬೆಳೆಗಳು ಸಮೃದ್ದವಾಗಲಿದೆ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. ಒಟ್ನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ರೈತರಿಗೆ ಉತ್ತಮವಾಗಲಿದೆ ಅನ್ನೋ ಸಂದೇಶ ಕೇಳಿ, ತಮ್ಮ ಊರಿನ ಕಡೆ ಭಕ್ತರು ಹೆಜ್ಜೆ ಹಾಕಿದರು..