ಗದಗ: ಗದಗ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಜೆಡಿಎಸ್ ನಿಂದ ಕಾಂಗ್ರೆಸ್ ವಿರುಧ್ಧ ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ತಹಶೀಲ್ದಾರ ಕಚೇರಿ ವರೆಗೂ ಹಿಂಬರಕಿ ನಡಿಗೆ ಮೂಲಕ ಪ್ರತಿಭಟನೆ ಮಾಡಲಾಯಿತು. ಗದಗ ಜಿಲ್ಲೆಯಿಂದ ಪ್ರತಿ ವರ್ಷ 500 ಕೋಟಿ ತೆರಿಗೆ ಸಂಗ್ರಹವಾಗ್ತಿದೆ.
ಆದ್ರೆ ಬಜೆಟ್ ನಲ್ಲಿ ಕೇವಲ 50 ಕೋಟಿ ನೀಡೋ ಮೂಲಕ ಅನ್ಯಾಯ ಅಂತಾ ಕಿಡಿ ಕಾರಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದೆ, ಅಭಿವೃದ್ಧಿಗೆ ಹಿನ್ನಡೆ ಹಿನ್ನೆಲೆ ಹಿಂಬರಕಿ ನಡಿಗೆ ಮಾಡಿದ್ದೇವೆ ಎಂದು ವೆಂಕನಗೌಡ ಗೋವಿಂದಗೌಡ್ರ ಹೇಳಿದರು. ಜೊತೆಗೆ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಿದೆ. ಮುಂಬರುವ SSLC, PUC ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ.
ಪರೀಕ್ಷೆ ಮುಗಿಯೋವರೆಗೂ ವಿದ್ಯಾರ್ಥಿಗಳಿಗಾಗಿ ವಿಶೆಷ ಬಸ್ ವ್ಯವಸ್ಥೆ ಮಾಡಿ, ಇಲ್ಲವೇ ಪರೀಕ್ಷೆ ಮುಗಿಯೋವರೆಗೂ ಶಕ್ತಿ ಯೋಜನೆ ತಡೆಹಿಡಿಯಿರಿ ಅಂತಾ ಆಗ್ರಹಿಸಿ ಗದಗ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಈ ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ ಮುಧೊಳ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.