ದೇವನಹಳ್ಳಿ:- ನನಗೂ ಟಿಕೆಟ್ ಬೇಕು, ನಾನು ಗೆದ್ದು ಆಡಳಿತ ನಡೆಸಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ದೇಶ ಮೊದಲು, ಪಕ್ಷ ನಂತರ, ಆಮೇಲೆ ಕಾರ್ಯಕರ್ತ ಎನ್ನುವುದು ಬಿಜೆಪಿ ಪಕ್ಷದ ಸಿದ್ದಾಂತ. ಈ ಸಿದ್ದಾಂತವನ್ನು ನಂಬಿ ನಾನು ಬಿಜೆಪಿ ಸೇರಿರುವುದು. ವಿಕಸಿತ ಭಾರತದ ದ್ಯೇಯದಂತೆ ನರೇಂದ್ರ ಮೋದಿ ದೇಶಕ್ಕೆ ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ನಾವೆಲ್ಲಾ ದುಡಿಯಬೇಕು. ನಾನು ನನ್ನ ಅಭಿಪ್ರಾವನ್ನು ತಿಳಿಸಬಾರದ. ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಆಸೆ ಅಭಿಪ್ರಾಯಗಳಿರುತ್ತವೆ.
ನನಗೂ ಟಿಕೆಟ್ ಸಿಗಲಿ, ನಾನು ಗೆದ್ದು ಆಡಳಿತ ನಡೆಸಬೇಕೆಂಬ ಅಸೆ ವ್ಯಕ್ತಪಡಿಸಿದ್ದೇನೆ ಎಂದರು.
ಚಿಕ್ಕಬಳ್ಳಾಪುರದ ಟಿಕೆಟ್ ಸಿಗದಿದ್ದರೆ ಡಾ.ಕೆ.ಸುಧಾಕರ್ ಬಿಜೆಪಿ ಪಕ್ಷ ಬಿಡ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಎಲ್ಲಾದರೂ ನಾನು ಈ ಮಾತು ಹೇಳಿದ್ದೇನಾ..!? ಇದೆಲ್ಲಾ ಮಾಧ್ಯಮಗಳ ಕಟ್ಟುಕಥೆ. ನಾನು ನನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಟಿಕೆಟ್ ಕೊಟ್ಟರೆ ಕೆಲಸ ಮಾಡ್ತೇನೆ. ಕೊಡದಿದ್ದರೂ ನರೇಂದ್ರ ಮೋದಿನ ಪಿ.ಎಂ. ಮಾಡಲು ದುಡಿಯುತ್ತೇನೆ. ಪಕ್ಷ ನಂಬಿ ಯಾರಿಗೆ ಟಿಕೆಟ್ ಕೊಟ್ಟರೂ ದುಡಿಯುತ್ತೇನೆ. ಆದರೂ ಕೆಲವು ಮಾಧ್ಯಮ ಸುಳ್ಳು ಸುದ್ದಿ ಪ್ರಚಾರ ಮಾಡ್ತಿವೆ. ಮಾಧ್ಯಮ ನನ್ನ- ನನ್ನ ಮಾತನ್ನ ನಂಬಬೇಕು, ಇಲ್ಲವಾದರೆ ನಾನು ಅಸಹಾಯಕನಾಗ್ತೇನೆ ಎಂದರು.