ಅಥಣಿ : ತಾಲೂಕಿನ ಶಿವನೂರು ಕ್ರಾಸ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವನ ಸ್ಥಿತಿ ಚಿಂತಾ ಜನಕವಾಗಿದೆ.
ಅಥಣಿ ಖಿಳೆಗಾವ ರಾಜ್ಯ ಹೆದ್ದಾರಿಯ ಶಿವನೂರ್ ಕ್ರಾಸ್ ಬಳಿ ನಿನ್ನೆ ಸಾಯಂಕಾಲ 5:00 ಗಂಟೆ ಸುಮಾರಿಗೆ ಸ್ಕಾರ್ಪಿಯೋ ಹಾಗೂ ಬೈಕ್ ಮದ್ಯ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಯಲ್ಲಿ ಬೈಕ್ ನುಜ್ಜು ಗುಚ್ಚಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.
ಸ್ಥಳಕ್ಕೆ ದೌಡಾಯಿಸಿದ 108 ಸಿಬ್ಬಂದಿಗಳು ಗಾಯಾಳುವನ್ನ ಅಥಣಿ ಸರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.