ಬೆಂಗಳೂರು :- ಅಡ್ಡ ಮತದಾನವಾದ್ರೆ ಶಾಸಕ ಸ್ಥಾನದಿಂದ ವಜಾ ಮಾಡಲಾಗುತ್ತದೆ ಎಂದು ಅಶೋಕ್ ಪಟ್ಟಣ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಎಲ್ಲರೂ ಸೋಮವಾರ ರಾತ್ರಿ ಹಿಲ್ಟನ್ ಹೊಟೇಲ್ ನಲ್ಲಿ ಉಳಿದುಕೊಳ್ಳಲಿದ್ದು, ಮಂಗಳವಾರ ಬೆಳಗ್ಗೆ ಬಸ್ ನಲ್ಲಿ ಬಂದು ಮತದಾನ ಮಾಡುತ್ತೇವೆ ಎಂದು ಹೇಳಿದರು.
ಹೊಟೇಲ್ ನಲ್ಲಿ ರಾತ್ರಿ ಎಲ್ಲರಿಗೂ ಯಾವ ರೀತಿ ಮತದಾನ ಮಾಡಬೇಕು ಎಂದು ತಿಳಿಸುತ್ತೇವೆ. ಮತದಾನ ಪ್ರಕ್ರಿಯೆ ಹೇಗಿರುತ್ತೆ, ಯಾವ ರೀತಿ ಮಾರ್ಕ್ ಮಾಡುವುದು ಎಂಬುದನ್ನು ಎಲ್ಲರಿಗೂ ತಿಳಿಸುತ್ತೇವೆ ಎಂದರು.
ಅಡ್ಡ ಮತದಾನ ಆಗುವ ಸಾಧ್ಯತೆ ಇಲ್ಲ. ಯಾಕೆಂದರೆ ಎಲ್ಲರೂ ತೋರಿಸಿಯೇ ಮತ ಹಾಕಬೇಕು. ಹೀಗಾಗಿ ಯಾರೂ ಬೇರೆಯವರಿಗೆ ಮತ ಹಾಕೋದಿಲ್ಲ. ಒಂದು ವೇಳೆ ಅಡ್ಡ ಮತದಾನ ಮಾಡಿದರೆ ಸ್ಪೀಕರ್ಗೆ ದೂರು ಕೊಟ್ಟು ಶಾಸಕ ಸ್ಥಾನದಿಂದ ವಜಾ ಗೊಳಿಸಿ ಕಠಿಣ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.