ಮೈಸೂರು: ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳಿರುವುದು ಹಸಿ ಸುಳ್ಳು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು. ‘ಬಿಜೆಪಿಯವರಿಗೆ ಎಸ್ಸಿಪಿ, ಟಿಎಸ್ಪಿ ಅಂದರೆ ಏನು ಅಂತಾನೇ ಗೊತ್ತಿಲ್ಲ. ವಾಸ್ತವ ಮರೆ ಮಾಚಿ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ.
ಚುನಾವಣೆ ಬಂದಿದ್ದರಿಂದ ಪರಿಶಿಷ್ಟರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ’ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಂ. ಲಕ್ಷ್ಮಣ್ ಹೇಳಿದರು. ಎಸ್ಸಿಪಿ, ಟಿಎಸ್ಪಿ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಆದರೆ ಎಸ್ಸಿ, ಎಸ್ಟಿ ಮಕ್ಕಳಿಗೆ ಕೊಡುತ್ತಿದ್ದ ಸ್ಕಾಲರ್ ಶಿಪ್ ಅನ್ನು ನಿಲ್ಲಿಸಿದ್ದೇ ಬಿಜೆಪಿ ಸರಕಾರ’ ಎಂದು ಲಕ್ಷ್ಮಣ್ ದೂರಿದರು.
ರಾತ್ರಿ ಮಲಗುವಾಗ ವಿಪರೀತ ಬೆವರುತ್ತಿದ್ದೀರಾ!? – ಎಚ್ಚರ, ಇದು ಮಾರಣಾಂತಿಕ ರೋಗದ ಮುನ್ಸೂಚನೆ!
ಜೆಡಿಎಸ್, ಬಿಜೆಪಿ ಮೈತ್ರಿ ಸೀಟು ಹಂಚಿಕೆಯನ್ನು ಸ್ವ್ಯಾಪಿಂಗ್ ಸಿಸ್ಟಂ ಎಂದು ಟೀಕಿಸಿದ ಎಂ. ಲಕ್ಷ್ಮಣ್, ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಚಿಹ್ನೆ ಮೇಲೆ ಚುನಾವಣೆ ಎದುರಿಸಿದರೆ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಜೆಪಿ ಚಿಹ್ನ ಮೇಲೆ ಸ್ಪರ್ಧಿಸಲಿದ್ದಾರೆ. ಹೀಗೆ ಮಾಡಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಗಿಸಲು ಹೊರಟಿದೆ ಎಂದರು.