ದಿನಾಂಕ 20-2-2024ರಂದು ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅತಿ ವಿಜೃಂಭಣೆಯಿಂದ ಜರುಗಿತು, ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಬಾರಿ ಸಂಖ್ಯೆಯ ವಿದ್ಯಾರ್ಥಿಗಳು ಜಯಘೋಷಣೆ ಕೊಗುತ್ತಾ ಸಂವಿದಾನ ಜಾಗೃತಿಯಲ್ಲಿ ವಿಶೇಷ ಪಾತ್ರ ವಹಿಸಿದರು,
ಪಟ್ಟಣದ ಅನೇಕ ಸಂಘಟನೆಗಳು, ಅನೇಕ ಮಹಾನ ಪುರುಷರ ಛದ್ಮವೇಶದಲ್ಲಿ ಮಿಂಚುತ್ತ ಸಬಿಕರನ್ನು ಮಂತ್ರಾಮುಗ್ದರನ್ನಗಿಸಿದವು ಪುರಸಭೆ ಸಿಬ್ಬಂದಿ ಹಾಗೂ ಜನಪ್ರತಿನಿದಿಗಳು ಭಾಗವಸಿಸಿದ್ದರು, ಪಟ್ಟಣದ ಅನೇಕ ಇಲಾಖೆಗಳ ಅಧಿಕಾರಿಗಳು ಮುಖ್ಯವಾಗಿ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಿದ್ದರು.
ಕಾರ್ಯಕ್ರಮ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವದರ ಮೂಲಕ ಪ್ರಾರಂಭವಾಯಿತು, ಕಾರ್ಯಕ್ರಮದ ಕುರಿತು ಪ್ರಸ್ತವಿಕವಾಗಿ ಚಿಂತಕ ಹಾಗೂ ಪುರಸಭೆ ಸದಸ್ಯ ಬಸವರಾಜ್ ಅರಕೇರಿ ಮಾತನಾಡಿ ಬ್ರಾತೃತ್ವ ಸಮಾನತೆಗೆ ಸಂವಿದಾನವೆ ಕಾರಣ ಎಂದು ಹೇಳಿದರು,
ನಂತರ ಮಾತನಾಡಿದ ಸಿ. ಆರ್. ಪಿ ಮಹಾಂತೇಶ್ ಮುಗಳಖೊಡ ಮಾತನಾಡಿ ಸಂವಿದಾನದ ರಚನೆ ಕುರಿತು ಬಹಳ ಅದ್ಬುತವಾಗಿ ಮಾತನಾಡಿದರು, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಪರಿಣಾಮಗಳ ಕುರಿತು ಪ್ರಲ್ಹಾದ ಕಾಂಬಳೆ ಮಾತನಾಡಿದರು ಶಾಲಾ ಮಕ್ಕಳು ಪ್ರಾರ್ಥಿಸಿದರು
ವರದಿ : ಎಂ. ಕೆ. ಸಪ್ತಸಾಗರ
ಚಿಕ್ಕೋಡಿ