ಬೆಂಗಳೂರು:- ಕಬಾಬ್ ತಿನ್ನುವಾಗ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಟೀಂ ನಡುವೆ ಗಲಾಟೆ ನಡೆದ ಘಟನೆ ಜರುಗಿದೆ.
ಇನ್ನೂ ಮೀಸೆ ಚಿಗುರದ ಹುಡಿಗರಿಗೆ ರೌಡಿಸಂ ಹುಚ್ಚು ಹೆಚ್ಚಾಗಿದೆ. ಕೇವಲ ಹದಿನೆಂಟು ಹತ್ತೊಂಬತ್ತು ವರ್ಷದ ಯುವಕರ ಪುಂಡಾಟಿಕೆ ಜೋರಾಗಿದೆ. ಪವನ್ ಎಂಬಾತನಿಂದ ಏರಿಯದಲ್ಲಿ ತನ್ನನ್ನು ನೋಡಿದ್ರೆ ಭಯ ಪಡ್ಬೇಕು ಅನ್ನೋ ಪ್ಲಾನ್ ಮಾಡಿದ್ದು, ಗಲಾಟೆ ಯಾಕೆ ಮಾಡ್ಕೋತೀರಾ ಅಂತ ಬುದ್ದಿವಾದ ಹೇಳಲು ಮುಂದಾದವ್ನಿಗೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲಾಗಿದೆ.
ದಮ್ಮಯ್ಯ ಬಿಟ್ಬಿಟ್ರಿ ಅಂತ ಕೆಳಗೆ ಬಿದ್ದು ಕೇಳಿಕೊಂಡ್ರೂ ಕಾಲಿನ ಮೇಲೆ ಪುಂಡರು ಕಲ್ಲೆತ್ತಾಕಿದ್ದಾರೆ. ಅಷ್ಟೂ ಸಾಲದು ಅಂತ ಮನೆ ಹತ್ರ ಫಾಲೋ ಮಾಡಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ.
ಮಾರಣಾಂತಿಕ ಗಾಯಗಳಿಂದ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದಪುರದಲ್ಲಿ ನಡೆದಿರೋ ಘಟನೆ ಇದಾಗಿದೆ.
ಕಾರ್ತಿಕ್ ಮತ್ತು ವಿನೀಶ್ ಎಂಬುವರ ಮೇಲೆ ಪವನ್ ಅಂಡ್ ಗ್ಯಾಂಗ್ ನಿಂದ ಹಲ್ಲೆ ನಡೆದಿದೆ. ಈ ಮೂಲಕ ಏರಿಯಾದಲ್ಲಿ ಹವಾ ಮೈಂಟೇನ್ ಮಾಡ್ಬೇಕು ಅನ್ನೋದು ಟಾರ್ಗೆಟ್ ಎಂಬುವುದು ಗೊತ್ತಾಗಿದೆ.
ಸದ್ಯ ಕೆ ಆರ್ ಪುರಂ ಪೊಲೀಸ್ರಿಂದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.