ಬೆಂಗಳೂರು:- ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸಲು ಸರ್ಕಾರದ ಆದೇಶ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿದೆ.
ಆದೇಶ ಪ್ರಶ್ನಿಸಿ ರಂಜಿ ಪೂಣಚ್ಚ, ಕುಟ್ಟಪ್ಪ ಅರ್ಜಿ ಸಲ್ಲಿಸಿದ್ದರು. ಕೊಡಗಿನಲ್ಲಿ ಜನರಿಗೆ ಸಿಐಡಿ ನೋಟಿಸ್ ನೀಡುತ್ತಿದ್ದು, ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗಿದೆ.
ನೋಟಿಸ್ನಿಂದ ಕೊಡಗು ನಿವಾಸಿಗಳ ಮೂಲಭೂತ ಹಕ್ಕಿಗೆ ಧಕ್ಕೆ ಎಂದು ವಾದ ಮಾಡಿದ್ದರಿಂದಾಗಿ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.