ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಒಳ-ಹೊರಗಿನ ಗುದ್ದಾಟ ಹೆಚ್ಚಾಗಿದೆ. ಟಿಕೆಟ್ಗಾಗಿ ಸ್ಥಳೀಯ V/S ಹೊರಗಿನ ಆಕಾಂಕ್ಷಿಗಳ ನಡುವೆ ಕಾದಾಟ ಶುರುವಾಗಿದೆ. ಬಿಜೆಪಿ ಟಿಕೆಟ್ಗಾಗಿ ಸ್ಥಳೀಯರ ಕಸರತ್ತು ಮುಂದುವರೆದಿದೆ. ವಿ. ಸೋಮಣ್ಣಗೆಟಾಂಗ್ ಕೊಡಲು ಸ್ಥಳೀಯ ಅಭ್ಯರ್ಥಿ ಕೂಗು ಕೇಳಿಬರುತ್ತಿದೆ. ಜಿಲ್ಲಾ ಖಜಾಂಜಿ ಪರಮೇಶ್ ಆಯ್ತು, ಇದೀಗ ದೊಡ್ಡಮನೆ ಗೋಪಾಲಗೌಡ ಸರದಿಯಾಗಿದೆ.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಅಸಲಿ ಕಾರಣ
ನಾನು ಟಿಕೆಟ್ ಆಕಾಂಕ್ಷಿ ಎಂದ ಹಿರಿಯ ನ್ಯಾಯವಾದಿ ಗೋಪಾಲಗೌಡ ಹೇಳಿದ್ದಾರೆ. ಗೋಪಾಲಗೌಡ ಬೆಂಬಲಿಗರು ಹಾಗೂ ವಕೀಲರಿಂದ ಬಿಜೆಪಿ ನಾಯಕರಿಗೆ ಪತ್ರ ಬರೆಯಲಾಗಿದ್ದು, ಒಕ್ಕಲಿಗ ಸಮುದಾಯದ ಮಠಾಧೀಶರ ಮೂಲಕ ವರಿಷ್ಠರಿಗೆ ಒತ್ತಡ ಹೇರಲಾಗುತ್ತಿದೆ. ಟಿಕೆಟ್ಗಾಗಿ ತೆರೆಮರೆಯಲ್ಲಿ ಕಸರತ್ತು ಮುಂದುವರೆದಿದೆ. ತಾನೂ ತುಮಕೂರು ಆಕಾಂಕ್ಷಿ ಎನ್ನುತ್ತಿರುವ ವಿನಯ್ ಬಿದರೆ. ದೆಹಲಿ ಮಟ್ಟದ ನಾಯಕರಲ್ಲಿಯೂ ವಿನಯ್ ಬಿದರೆ ಬಗ್ಗೆ ಮಾತುಕತೆ ನಡೆಯುತ್ತಿದೆ.