ಗದಗ:- ಭಾವೈಕ್ಯತೆಯ ದಿನಾಚರಣೆ ವಿಚಾರಕ್ಕೆ ಗದಗನ ಎರಡು ಮಠಗಳ ಮಧ್ಯೆ ಸಂಘರ್ಷ ವಿಚಾರವಾಗಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಶ್ರೀ ಕೌಂಟರ್ ಕೊಟ್ಟಿದ್ದಾರೆ.
ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತೆ ದಿನವನ್ನಾಗಿ ಆಚರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾವೈಕ್ಯತೆ ದಿನ ಅನ್ನೋದು ಏಕವ್ಯಕ್ತಿಗೆ ಮೀಸಲು ಅಲ್ಲ..ತೋಂಟದಾರ್ಯ ಮಠ ಸರ್ವಜನಾಂಗದ ಶಾಂತಿಯ ತೋಟ..ಜಾತ್ರೆಯ ಕಮೀಟಿಗೆ ಮುಸ್ಲಿಂ ವ್ಯಕ್ತಿಯನ್ನ ಅಧ್ಯಕ್ಷರನ್ನಾಗಿ ಮಾಡಿದ್ದೇವೆ..ಮಸೀದಿಗಳಿಗೆ ಮಠದ ಜಾಗ ಬಿಟ್ಟು ಕೊಟ್ಟಿದ್ದೇವೆ. ಲಿ. ಸಿದ್ಧಲಿಂಗ ಶ್ರೀಗಳು ಎಲ್ಲಾ ಸಮುದಾಯಗಳ ಜೊತೆಗೆ ಭಾವೈಕ್ಯತೆಯಿಂದ ಇದ್ದರು.. ಮಠದಲ್ಲಿ ಅಲ್ಲಾ ನನ್ನ ಮಸೀದಿಯಲ್ಲಿ ಸಿದ್ಧಲಿಂಗನನ್ನ ಕಾಣಬೇಕೆಂದು ಶ್ರೀಗಳು ಹೇಳಿದ್ದರು..
ಇನ್ನೊಬ್ಬರನ್ನ ಟೀಕೆ ಮಾಡಬಾರದು ನಮ್ಮ ಕೆಲಸ ನಾವು ಮಾಡ್ಕೊಂಡು ಹೋಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿದ್ದ ಸಿದ್ದಲಿಂಗ ಶ್ರೀಗಳಿಗೆ ಭಾವೈಕ್ಯತೆ ಪದ ಬಳಕೆ ಬೇಡ ಎಂದಿದ್ದ ದಿಂಗಾಲೇಶ್ವರ ಶ್ರೀ.. ಲಿಂಗಾಯತ ಪ್ರತ್ಯೇಕ ಧರ್ಮವೇ ಅದನ್ನ ಯಾರೂ ಒಡೆಯಬೇಕಿಲ್ಲ.. ವೀರಶೈವ ಅನ್ನೋದು ಲಿಂಗಾಯತ ಧರ್ಮದ ಒಂದು ಭಾಗ. ಈ ಹಿಂದೆ ಭಾವೈಕ್ಯತೆ ದಿನ ಘೋಷಿಸಿ ಬಸವರಾಜ್ ಬೊಮ್ಮಾಯಿ ಸುಮ್ಮನಾಗಿದ್ದರು. ರಾಜಕಾರಣಿಗಳು ಯಾರ್ಯಾರಿಗೆ ಮಣಿತಾರೋ ಗೊತ್ತಿಲ್ಲ. ಯಾರೋ ಒಬ್ಬರಿಗೆ ಮಣಿದು ಆಚರಣೆ ಕೈ ಬಿಟ್ಟರು..
ಹಿಂದೂ ಧರ್ಮಕ್ಕೆ ಸಂಸ್ಥಾಪಕ ಯಾರು..? ಪರ್ಷಿಯನ್ನರು ಹಿಂದೂ ಅಂತ ಕರೆದರು ಎಂದು ಪ್ರಶ್ನೆ ಮಾಡಿದರು.
ಭಾವೈಕ್ಯತೆ ದಿನ ಆಚರಿಸಿದರೇ ಫಕ್ಕೀರೇಶ್ವರ ಮಠದ ಭಕ್ತರಿಂದ ಕರಾಳ ದಿನಾಚರಣೆ ವಿಚಾರವಾಗಿ ಮಾತನಾಡಿ, ಅವರ ಕರಾಳ ದಿನಾಚರಣೆಗೆ ನಾವು ಏನೂ ಮಾಡಕ್ಕಾಗಲ್ಲ..ನಮಗೆ ರಕ್ಷಣೆ ಬೇಕು ಅಂತ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕರಾಳ ದಿನಾಚರಣೆ ಮಾಡುವವರಿಗೆ ಸರ್ಕಾರ ಪ್ರತಿಬಂಧ ಮಾಡಬೇಕು. ಭಾವೈಕ್ಯತೆಯ ದಿನಾಚರಣೆ ಮಾಡೋದೂ ಸರ್ಕಾರ ತಪ್ಪು ಅಂದ್ರೆ ಕೈ ಬಿಡ್ತೇವೆ ಎಂದರು.