ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ನ ನಿಮಿತ್ತ ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಗೌತಮ್ ಗಂಭೀರ್, ಬಹಳಷ್ಟು ಸಮಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯಲು ಚಿಂತಿಸುತ್ತಿದ್ದೆ ಎಂದು ಹೇಳಿದ್ದಾರೆ. “ಕೇವಲ ಒಬ್ಬ ಆಟಗಾರ ಮಾತ್ರ ನನ್ನ ನಿದ್ದೆಗೆಡಿಸುತ್ತಿದ್ದ. ಐಪಿಎಲ್ ಸಮಯದಲ್ಲಿ ಕ್ರಿಸ್ ಗೇಲ್ ಅಥವಾ ಎಬಿಡಿ ವಿಲಿಯರ್ಸ್ ಗಿಂತ ರೋಹಿತ್ ಶರ್ಮಾ ನನ್ನ ನಿದ್ದೆಯನ್ನು ಹಾಳು ಮಾಡುವಂತಹ ಆಟಗಾರನಾಗಿದ್ದ.
ರೋಹಿತ್ ಶರ್ಮಾ ವಿಕೆಟ್ ಪಡೆಯಲು ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಇನ್ನೂ ಕೆಲವೊಮ್ಮೆ ಪ್ಲ್ಯಾನ್ ಸಿ ಕೂಡ ರೂಪಿಸುತ್ತಿದ್ದೆವು. ಏಕೆಂದರೆ ರೋಹಿತ್ ಶರ್ಮಾ ಮೈದಾನದಲ್ಲಿ ನಿಂತರೆ ಆತನನ್ನು ಯಾರಾದರೂ ನಿಯಂತ್ರಿಸುತ್ತಾರೆ ಎಂದು ನಾನು ಯೋಚಿಸುತ್ತಿರಲಿಲ್ಲ,” ಎಂದು ಕೆಕೆಆರ್ ಮೆಂಟರ್ ಹೇಳಿದ್ದಾರೆ.
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?
ರೋಹಿತ್ ಶರ್ಮಾಗೆ ಮಾತ್ರ ನಾನು ಎ, ಬಿ ಮತ್ತು ಸಿ ಪ್ಲ್ಯಾನ್ ಗಳನ್ನು ರೂಪಿಸುತ್ತಿದ್ದೆ. ಏಕೆಂದರೆ ಇವುಗಳಲ್ಲಿ ಯಾವುದಾದರೂ ಒಂದು ರೂಪದಿಂದ ಆತನ ವಿಕೆಟ್ ಪಡೆಯಲು ಬಯಸಿದ್ದೆ. ತಮ್ಮ ನಾಯಕತ್ವದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಗೆ ಐಪಿಎಲ್ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ದರು. ಆ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ 2023ರಲ್ಲಿ ಸರಿಗಟ್ಟಿದ್ದಾರೆ.
“ನನಗೆ ಐಪಿಎಲ್ ಟೂರ್ನಿಯಲ್ಲಿ ಭಯಹುಟ್ಟಿಸಿದ್ದ ಒಬ್ಬ ಆಟಗಾರ ಎಂದರೆ ಅದು ರೋಹಿತ್ ಶರ್ಮಾ. ಆತನಿಗೆ ಬಿಟ್ಟು ಬೇರೆ ಯಾವುದೇ ಬ್ಯಾಟರ್ ಗಳಿಗೂ ನಾನು ರಣತಂತ್ರ ರೂಪಿಸುತ್ತಿರಲಿಲ್ಲ. ಪಂದ್ಯದ ಹಿಂದಿನ ದಿನ ನಾನು ಆತ ಆಡಿರುವ ಕೆಲವು ವಿಡಿಯೋ ತುಣುಕುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಪ್ಲ್ಯಾನ್ ಎ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯಲು ಉತ್ತಮವಾಗಿದೆ ಎಂದು ಭಾವಿಸುತ್ತಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗದಿದ್ದರೆ ಎಂದು ಅರಿತು ಮತ್ತೊಂದು ರಣತಂತ್ರವನ್ನು ರೂಪಿಸುತ್ತಿದ್ದೆ,” ಎಂದು ಕೆಕೆಆರ್ ಮಾಜಿ ನಾಯಕ ತಿಳಿಸಿದ್ದಾರೆ.