ರಾಜ್ಕೋಟ್: ಪ್ರವಾಸಿ ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾಗೆ ಮೂರನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಆಘಾತ ಎದುರಾಗಿತ್ತು. ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತಾಯಿಯ ಅನಾರೋಗ್ಯ ಕಾರಣ ಪಂದ್ಯ ಮಧ್ಯದಲ್ಲೇ ತಂಡ ತೊರೆದು ಮನೆಗೆ ಹಿಂದಿರುಗಿದ್ದರು. ಹೀಗಾಗಿ ಮೂರನೇ ದಿನ ಅಶ್ವಿನ್ ಅಂಗಣದಿಂದ ಸಂಪೂರ್ಣ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಪಂದ್ಯಕ್ಕೆ ಪೂರ್ಣ ಅಲಭ್ಯರಾಗುವ ಸಾಧ್ಯತೆ ಇತ್ತು.
ಆದರೆ, ಪಂದ್ಯದ ನಾಲ್ಕನೇ ದಿನ ಆರ್ ಅಶ್ವಿನ್ ತಂಡ ಮರಳಿ ಸೇರಿಕೊಂಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಓಪನರ್ ಝ್ಯಾಕ್ ಕ್ರಾವ್ಲಿ ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್ ಕೆರಿಯರ್ನ 500ನೇ ವಿಕೆಟ್ ಪಡೆದುದಾಖಲೆ ಬೆರೆದಿದ್ದ ಆರ್ ಅಶ್ವಿನ್, ರಾಜ್ಕೋಟ್ ಟೆಸ್ಟ್ ಪಂದ್ಯದ 4ನೇ ಮತ್ತು 5ನೇ ದಿನದಾಟಕ್ಕೆ ಹಾಜರಾಗಲು ಮನೆಯಿಂದ ಹಿಂದಿರುಗಿದ್ದಾರೆ. ಅಶ್ವಿನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅದರ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದವು.
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?
ಇನ್ನು ನಾಲ್ಕನೇ ದಿನದಾಟದ ಆರಂಭಕ್ಕೂ ಮುನ್ನ ಮಾತನಾಡಿದ್ದ ಟೀಮ್ ಇಂಡಿಯಾದ ನೈಟ್ವಾಚ್ಮನ್ ಕುಲ್ದೀಪ್ ಯಾದವ್ ಅನುಭವಿ ಆರ್ ಅಶ್ವಿನ್ ಬಹುಬೇಗ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದರು. ಇನ್ನು ಅಶ್ವಿನ್ ಹಿಂದಿರುಗಿರುವುದು ಭಾರತ ತಂಡದ ಬೌಲಿಂಗ್ಗೆ ಆನೆ ಬಲ ಬಂದಂತ್ತಾಗಿದೆ. 2ನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಅಶ್ವಿನ್ ಸೇವೆ ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
“ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಅಶ್ವಿನ್ ಭಾಯ್ ಶೀಘ್ರವೇ ತಂಡಕ್ಕೆ ಮರಳುತ್ತಾರೆ ಎಂದು ಅಂದುಕೊಂಡಿದ್ದೇನೆ,” ಎಂದು ಕುಲ್ದೀಪ್ ಯಾದವ್ ಹೇಳಿಕೊಂಡಿದ್ದರು. ಕುಲ್ದೀಪ್ ಯಾದವ್ ಮೂರನೇ ದಿನದ ಅಂತ್ಯದ ಹೊತ್ತಿಗೆ ಭಾರತ ತಂಡದ ಪರ ನೈಟ್ವಾಚ್ಮನ್ ಆಗಿ ಕಣಕ್ಕಿಳಿದು 4ನೇ ದಿನವೂ ದಿಟ್ಟ ಆಟವಾಡಿದರು. 3ನೇ ವಿಕೆಟ್ಗೆ ಶುಭಮನ್ ಗಿಲ್ ಜೊತೆಗೂಡಿ 55 ರನ್ಗಳ ಜೊತೆಯಾಟವಾಡಿದ ಕುಲ್ದೀಪ್, ಎದುರಿಸಿದ 93 ಎಸೆತಗಳಲ್ಲಿ 3 ಫೋರ್ ಮತ್ತೊಂದು ಸಿಕ್ಸರ್ನೊಂದಿಗೆ 27 ರನ್ಗಳ ಕೊಡುಗೆ ಕೊಟ್ಟರು.