ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದದ ಶ್ರೀ ಸಿದ್ದೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರಾಯಭಾಗ ವತಿಯಿಂದ 7 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕಾಟಾಚಾರಕ್ಕೆ ಎಂಬಂತೆ ನಡೆಯಿತು, ಬಾರಿ ನೀರಸವಾಗಿ ಮೂಡಿಬಂದ ಕಾರ್ಯಕ್ರಮಕ್ಕೆ ಕನ್ನಡಮನಸುಗಳ ಅನುಪಸ್ಥಿತಿ, ಸಾಹಿತ್ಯಜಾತ್ರೆಗೆ ಮಕ್ಕಳೇ ಖಾತ್ರಿ
ಸಾಹಿತ್ಯ ಬಿಂಬಿಸುವ ಪುಷ್ಟಿಕರಿಸುವ ಕನ್ನಡ ಸಾಹಿತ್ಯದ ದಿಗ್ಗಜರಿಗೆ ಭಾವಚಿತ್ರಗಳನ್ನು ಎಲ್ಲಿಯೂ ಬಳಸದೆ ಅವಮಾನ ಮಾಡಿದ್ದಾರೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳು ಹಾಗೂ ಕನ್ನಡಕ್ಕೆ ದುಡಿದ ಹಾಗೂ ಮಡಿದ ಮನಸುಗಳು ಇಲ್ಲಿ ಮಾಯವಾಗಿ ಹೋಗಿ ಕನ್ನಡ ಪರಿಮಳವೆ ಪತ್ತೆಇಲ್ಲಾದಂತಾಗಿದೆ. ಕನ್ನಡದ ಕಣ್ಮಣಿಗಳ ಬದಲಾಗಿ ಪರಿಷತ್ತಿನ ಪದಾಧಿಕಾರಿಗಳ ಭಾವಚಿತ್ರ ಬಳಕೆ ಎಷ್ಟು ಸೂಕ್ತ..? ಭುವನೇಶ್ವರಿ ತಾಯಿಯ ಮೆರವಣಿಗೆಯಲ್ಲಿ ಬಳಸಲಾದ ವಾಹನವೊಂದನ್ನು ಹೊರತು ಪಡಿಸಿ, ಎಲ್ಲಿಯೂ ಸಾಹಿತಿಗಳ ಭಾವಚಿತ್ರ ಅಳವಡಿಕೆ ಮಾಡಿರುವದಿಲ್ಲ
“ಕನ್ನಡ ಏನೆ ಕುಣಿದಾಡುವದೆನ್ನೆಡೆ” ಎಂಬಂತೆ ಅತ್ಯಂತ ಉತ್ಸಾಹ ತುಂಬಿ ಎತ್ತ ನೋಡಿದತ್ತ ಕನ್ನಡ ಬಾವುಟಗಳ
ಹಾರಾಟವಾಗುವದು ಬಿಟ್ಟು ಕನ್ನಡ ಬಾವುಟಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಯಿತು, ಇತ್ತ ಪ್ರಾರಂಬೊತ್ಸವ ಕಾರ್ಯಕ್ರಮ ಸರಿಯಾದ ಸಮಯಕ್ಕೆ ನಡೆಯದೆ ಇತರ ಗೋಷ್ಠಿಗಳು ಸಹ ಸರಿಯಾದ ಸಮಯಕ್ಕೆ ನಡೆಯಲ್ಲಿಲ್ಲ, ಗೋಷ್ಠಿಯಲ್ಲಿ ಯಾರು ಏನೂ ಗೋಷ್ಠಿಯ ವಿಷಯವಾಗಿ ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಯಿತು ಯಾಕಂದರೆ ಸಮ್ಮೇಳನದಲ್ಲಿ ಧ್ವನಿವರ್ಧಕ ವ್ಯವಸ್ಥೆ ಕೂಡ ಸರಿಯಾಗಿರಲಿಲ್ಲ, ಸಮ್ಮೇಳದಲ್ಲಿ ಮುಖ್ಯವಾಗಿ ಸಾಹಿತ್ಯಕವಾಗಿ ಸಂವಹನ ನಡೆಸಲು ತಾಂತ್ರಿಕ ದೋಷದಿಂದ ಸಾಧ್ಯವಾಗದೆ ಹೋಯಿತು,
ದಲಿತ ಕವಿಗಳಗೆ ಸಾಹಿತಿಗಳಿಗೆ ಹಾಗೂ ಕವಿಯತ್ರಿಯರಿಗೆ ಇನ್ನೂ ಅವಕಾಶ ಸಿಗಬೇಕಿತ್ತು, ಈ ವೇದಿಕೆ ಕೆಲವೇ ಜನರ ಸ್ವತ್ತಾಗಿದೆ, ಸಮ್ಮೇಳನಕ್ಕೆ ಸಂಬಂಧವೆ ಇಲ್ಲದವರು ಕೂಡ ವೇದಿಕೆ ಅಲಂಕರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು
ಪ್ರಾದ್ಯಾಪಕರೋರ್ವರು ನೋವಿನ ಮಾತುಗಳನ್ನು ಹೇಳುವದರ ಮೂಲಕ ಬೇಸರ ವ್ಯಕ್ತಪಡಿಸಿದರು. ಜನರಿಲ್ಲದೆ ಖುರ್ಚಿಗಳು ಬಿಕೋ ಎನ್ನುತ್ತಿರುವದು ಒಂದು ಕಡೆಯಾದರೆ ಚಿಕ್ಕ ಚಿಕ್ಕ ಮಕ್ಕಳನ್ನು ನೀರು ಹೊರುವ ಕೆಲಸದಲ್ಲಿ ಬಳಕೆಮಾಡಿರುವದು ಸಮ್ಮೇಳದ ವೇದಿಕೆಯ ಮುಂದೆಯೇ ನಡಿದು ಹೋಯಿತು
ಮರೀಚಿಕೆಯಾದ ಪುಸ್ತಕ ಮಳಿಗೆಗಳು :
ಸಮ್ಮೇಳದಲ್ಲಿ ಬಹುಮುಖ್ಯವಾಗಿ ಪುಸ್ತಕ ಮಳಿಗೆಗಳು ಬಹುಮುಖ್ಯ ಪಾತ್ರವಹಿಸುತ್ತವೆ, ಕನ್ನಡ ಸಾಹಿತ್ಯ ಕೃತಿಗಳು, ಕಥೆ ಕಾದಂಬರಿ, ಸಂಕಲನ, ವಚನ ಸಾಹಿತ್ಯದ ಪುಸ್ತಕ, ನಾನಾ ತರಹದ ಪುಸ್ತದ ಖರೀದಿಸುವವರಿಗೆ ತುಂಬಾ ನಿರಾಸೆಯಾಯಿತು ಕಾರಣ ಯಾವೊಂದು ಪುಸ್ತಕ ಮಳಿಗೆಯೂ ಇರಲಿಲ್ಲ ಇಷ್ಟು ಸಾಕು ಆಯೋಚಕರ ಹರಸಾಹಸ ತಿಳಿಯಲು,
ಬಳೆ ಅಂಗಡಿ, ಔಷದಿ ಅಂಗಡಿಗಳು ಇದ್ದವು, ಪುಸ್ತದ ಬಂಡಾರದ ಬದಲು ಖಾದಿ ಬಟ್ಟೆ ಮಳಿಗೆಗಳು ತಲೆ ಎತ್ತಿದ್ದವು,
7ನೆಯ ರಾಯಭಾಗ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಐ ಆರ್ ಮಠಪತಿ ಯವರ ಭಾಷಣದ ಪುಸ್ತಕ ಕೆಲವೇ ಜನರ ಕೈ ಸೇರಿತು, ಇಷ್ಟೊಂದು ಕಾಟಾಚಾರದ ಸಮ್ಮೇಳನ ನಡೆಸಿ ಪ್ರಯೋಜನವಿಲ್ಲಾ ಸಾಹಿತ್ಯ ಅಡುಗೆ ಉಣ್ಣಲು ಕರೆಯಿಸಿ ಊಟಕ್ಕೆ ಹಾಕದೆ ಹಸಿದ ಹೊಟ್ಟೆಯಲ್ಲೇ ಹಿಂತುರುಗುವ ಪರಿಸ್ಥಿತಿ ಸಾಹಿತ್ಯಾ ಅಭಿರುಚಿಕರರಿಗೆ ಆಯಿತು, ಇನ್ನಾದರೂ ಆಗಿರುವ ಅವಘಡಗಳನ್ನು ತಿದ್ದಿಕೊಂಡು ಮುಂದೆ ಯಾವ ರೀತಿಯಾದ ಸುಧಾರಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ
ವರದಿ =ಎಂ. ಕೆ. ಸಪ್ತಸಾಗರ