ರಾಯಚೂರು:- ಶಾಸಕಿ ಕರೆಮ್ಮಾ ನಾಯಕ್ ಪುತ್ರ ಮತ್ತು ಶಾಸಕಿ PA ರಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದು ಆರು ದಿನವಾದ್ರೂ ಎಂಎಲ್ಎ ಪುತ್ರನ ಬಂಧನವಿಲ್ಲ.
ಅಕ್ರಮ ಮರಳುಗಾರಿಕೆ ಟ್ರಾಕ್ಟರ್ ವಶಕ್ಕೆ ಪಡೆದ ವಿಚಾರವಾಗಿ ಶಾಸಕಿ ಪುತ್ರ ಹಲ್ಲೆ ನಡೆಸಿರುವುದಾಗಿ ಕಾನ್ಸ್ ಟೇಬಲ್ ಹನಮಂತರಾಯ ಆರೋಪಿಸಿದ್ದರು. ಶಾಸಕಿ ಪುತ್ರನ ದರ್ಪದ ವಿರುದ್ಧ ಫೆ 16 ಕಾಂಗ್ರೆಸ್ ಮಹಿಳಾ ಘಟಕ ಕೆರಳಿತ್ತು. ನಿನ್ನೆ ಕನ್ನಡ ಪರ ಸಂಘಟನೆಗಳು ಈ ಘಟನೆಯನ್ನ ಖಂಡಿಸಿದ್ದವು. ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆದು ಆರು ದಿನವಾದ್ರೂ ಈವರೆಗೆ ಶಾಸಕಿ ಪುತ್ರನ ಬಂಧನವಾಗದೇ ಇರೋದಕ್ಕೆ ರಾಜಕೀಯ ಒತ್ತಡ ಎ ಹೇಳಲಾಗುತ್ತಿದೆ. ಶಾಸಕಿ ಪುತ್ರನ ಬಂಧನವಾಗದೇ ಇರುವುದು ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬೆಳವಣಿಗೆ ಬೆನ್ನಲ್ಲೇ ದೇವದುರ್ಗ ಲಾ ಆಂಡ್ ಆರ್ಡರ್ ಠಾಣೆ ಹಾಗೂ ಟ್ರಾಫಿಕ್ ಠಾಣೆ ಸಿಬ್ಬಂದಿ ಭದ್ರತೆ ಜೊತೆ ಇತರೆ ವಿಷಯಗಳನ್ನ ಪ್ರಸ್ತಾಪಿಸಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ. ತಮ್ಮ ಮೇಲೆ ಕಾರ್ಯನಿರ್ವಹಣೆ ವೇಳೆ ರಾಜಕೀಯ ಒತ್ತಡ, ಇತರೆ ಕಿರಿಕಿರಿ ಬಗ್ಗೆ ಪೊಲೀಸ್ ಸಿಬ್ಬಂದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೇವದುರ್ಗ ಲಾ ಆಂಡ್ ಆರ್ಡರ್ ಠಾಣೆಯ 36 ಜನ ಹಾಗೂ ಟ್ರಾಫಿಕ್ ನ 23 ಸಿಬ್ಬಂದಿ ಸೇರಿ ಒಟ್ಟು 59 ಜನ ಸಹಿ ಮಾಡುವ ಮೂಲಕ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.