ವಿಜಯಪುರ:- ಯಡಿಯೂರಪ್ಪ ಮೊದಲು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ ಎಂದು MB ಪಾಟೀಲ್ ಹೇಳಿದ್ದಾರೆ
ನಿನ್ನೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಯಡಿಯೂರಪ್ಪ ಟೀಕಿಸಿರುವುದಕ್ಕೆ ಪಾಟೀಲ ಪ್ರತಿಕ್ರಿಯೆ ಕೇಳಿಸಿಕೊಳ್ಳಿ. ಹಿಂದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ 606 ಭರವಸೆಗಳನ್ನು ನೀಡಿ ಕೇವಲ 55 ಅನ್ನು ಮಾತ್ರ ಈಡೇರಿಸಿತ್ತು. ಆದರೆ 2013ರಲ್ಲಿ ಸಿದ್ದರಾಮಯ್ಯ ತಾವು ನೀಡಿದ 165 ಭರವಸೆಗಳಲ್ಲಿ 158 ಈಡೇರಿಸಿದ್ದಲ್ಲದೆ, 30 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು, ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಯಡಿಯೂರಪ್ಪ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ ಎಂದು ಪಾಟೀಲ್ ಖಾರವಾಗಿ ಟೀಕಿಸಿದರು.