ತುಮಕೂರು:- ರಾಜ್ಯಸಭೆ ಟಿಕೆಟ್ ಕೊನೆ ಹಂತಕ್ಕೆ ಬಂದು ಮಿಸ್ ಆಗಿದ್ದಕ್ಕೆ ವಸತಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಿಗ್ಗೆ ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ ಭೇಟಿಯಾಗಿದ್ದೆ, ಬಳಿಕ ಸಿದ್ದರ ಬೆಟ್ಟಕ್ಕೆ ಹೋಗಿದ್ದೆ. ನಂತರ ಸಿದ್ದಗಂಗಾ ಮಠದ ಗುರುಗಳಿಗೆ ಪೋನ್ ಮಾಡ್ದೆಡಿದ್ದೆ. ಪ್ರಸಾದಕ್ಕೆ ಮಠಕ್ಕೆ ಬನ್ನಿ ಎಂದು ಕರೆದಿದ್ದಕ್ಕೆ ಬಂದಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ನಡೆದಾಡುವ ದೇವರು ಇದಿದ್ದು. ಹಾಗಾಗಿ ತುಮಕೂರಿ ಎಲ್ಲಾ ಮಠಗಳಿಗೆ ಭೇಟಿ ಕೊಡುತ್ತಿದ್ದೇನೆ. ಬಾಲಗಂಗಾಧರನಾಥ್ ಹಾಗೂ ಸಿದ್ದಗಂಗಾ ಶ್ರೀಗಳು ನನಗೆ ಗುರುಗಳು. ಮಠ ಮಾನ್ಯಗಳು ನನಗೇನು ಹೊಸದಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆ ಅಂದಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು . ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬದಲಾಗಿದೆ. ಒಳ್ಳೇ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದಾರೆ, ಸ್ವಾಗತ. ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಲೋಕಸಭೆ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಹೈಕಮಂಡ್ ಏನು ಹೇಳುತ್ತೆ ಅದನ್ನೇ ಹೇಳುತ್ತೇನೆ. ಹೈಕಮಂಡ್ ಟಿಕೆಟ್ ಕೊಟ್ಟರೆ ನಿಂತುಕೊಳ್ಳಬೇಕು. ಸ್ಪರ್ಧೆ ಮಾಡ್ಬೇಕು ಅಂದ್ರೆ ಸ್ಪರ್ಧೆ ಮಾಡುತ್ತೇನೆ. ಇದು ನನ್ನ ಡಿಮಾಂಡ್ ಅಲ್ಲ ಮನವಿ ಎಂದು ಹೇಳಿದರು.
ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಮಾತಿಗೆ ವಿಚಾರದ ಪ್ರತಿಕ್ರಿಯಿಸಿ, ಮಾಧುಸ್ವಾಮಿ ಅವರು ನಮ್ಮ ಹಿರಿಯ ನಾಯಕರು. ನನಗಿಂತ ಬುದ್ದಿವಂತರು, ಹೋರಾಟದಿಂದ ಬಂದವರು. ವಕೀಲರು. ಸ್ಥಳೀಯರು ಮತ್ತೊಬ್ಬರು ಅನ್ನೋದಕ್ಕಿಂತ ದೇಶ ಪ್ರದಾನಿ ಮೋದಿ ಅವರ ಆಡಳಿತ ಬಯಸಿದೆ. ನರೇಂದ್ರ ಮೋದಿ ಅವರು ಗುಜರಾತ್ ನವರು ಎಲ್ಲಿ ಬಂದು ನಿಂತ್ರು. ಮಾಧುಸ್ವಾಮಿ ಅವರು ಹೇಳೋದು ಸಹಜ. ಅದಕ್ಕೆ ನನ್ನ ಭಿನ್ನಾಭಿಪ್ರಾಯ ಏನಿಲ್ಲ. ಹೈಕಮಂಡ್ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ತಮಕೂರು ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಧುಸ್ವಾಮಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಇನ್ನು ಇದೇ ವೇಳೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಅವರ ಸೋಲಿನ ಬಗ್ಗೆ ಮಾತನಾಡಿ, 2003 ರಲ್ಲಿ ಬೆಂಗಳೂರಿನಲ್ಲಿ ನಾನೊಬ್ಬನೇ ಗೆದ್ದಿದ್ದು. ದೇವೆಗೌಡರ ಖುಣ ಇದೆ ಅಂತ ಹೋಗಿ ತಿರಿಸಿದವನು ನಾನೊಬ್ಬನೇ. ದೇವೆಗೌಡರು ಮತ್ತೆ ಜನತಾದಳದ ವಿರುದ್ಧ ನಾನೇನು ಮಾಡಿಲ್ಲ. ಪಕ್ಷ ನನಗೆ ಏನ್ ಜವಾಬ್ದಾರಿ ಕೊಟ್ಟಿದೆ ಅದನ್ನ ನಾನು ಮಾಡಿದ್ದೇನೆ. ದೇವೆಗೌಡರ ಜೊತೆ 28 ವರ್ಷ ಇದ್ದೇನೆ. ಅವರ ಹತ್ತಿರನೇ ನಾನು ರಾಜಕೀಯ ಎಬಿಸಿಡಿ ಕಲಿತಿದ್ದು. ನಾನು ಎಲ್ಲೂ ಅಪಚಾರದ ಮಾತನ್ನ ಆಡಿಲ್ಲ . ಇವತ್ತು ಜೆಡಿಎಸ್ ಬಿಜೆಪಿ ಹೋಂದಾಣಿಕೆಯಾಗಿದೆ. ದೇವೆಗೌಡರೇ ಮೋದಿ ಪ್ರಧಾನಿ ಆಗ್ಬೇಕು ಅಂತ ಬಯಸಿದ್ದಾರೆ ಎಂದರು