ಬೆಂಗಳೂರು: ಅವನೊಬ್ಬ ಹುಚ್ಚು ಪ್ರೇಮಿ ದೂರದ ಊರಿನಿಂದ ತನ್ನವಳನ್ನ ನೋಡ್ಬೇಕು ಎಂದು ಬಂದಿದ್ದ.ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ಕೊಡ್ಬೇಕು ಎಂದು ಕಾತುರನಾಗಿದ್ದ. ಆದರೆ ಜನರ ದೃಷ್ಟಿಯಲ್ಲಿ ಆತ ಕಳ್ಳನಾಗಿದ್ದ. ಪೊಲೀಸರೂ ಕೂಡ ಠಾಣೆಯಲ್ಲಿ ಕರೆಸಿ ಕೂರಿಸಿದ್ರು. ಆದ್ರೆ ಅಸಲಿ ಸಂಗತಿಯೇ ಬೇರೆ ಇತ್ತು..ಆತನ ಕಥೆ ಕೇಳಿ ಪೊಲೀಸರೇ ಅಯ್ಯೋ ಅಂದುಕೊಂಡಿದ್ರು…
ಮೊಬೈಲ್ ಹಿಡಿದು ಓರ್ವ ಓಡ್ತಿದ್ರೆ..ಆತನನ್ನ ಮತ್ತೋರ್ವ ಹಿಂಬಾಲಿಸಿದ್ದ..ಇವ್ರಿಬ್ರ ಓಟ ನೋಡಿ ಮಹಿಳಾ ಟ್ರಾಫಿಕ್ ಸಿಬ್ಬಂದಿ ಕೂಡ ಹಿಂಬಾಲಿಸಿದ್ರು..ಇವ್ರ ಈ ಹೈಡ್ರಾಮಾವನ್ನು ಜನ್ರೆಲ್ಲ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ರು..ಕೊನೆಗೂ ಮೊಬೈಲ್ ಸಮೇತ ಆತ ಸಿಕ್ಕಿಬಿದ್ದಿದ್ದ..ಆ ಕ್ಷಣಕ್ಕೆ ಜನ್ರೆಲ್ಲ ಮೊಬೈಲ್ ಕಳ್ಳ ಅಂತಲೇ ಅಂದುಕೊಂಡಿದ್ರೆ ಠಾಣೆಗೆ ಕರೆಸಿ ವಿಚಾರಿಸಿದಾಗಲೇ ನೋಡಿ ಅಸಲಿ ಸಂಗತಿ ಬಯಲಾಗಿದ್ದು..
ಹೌದು ಆವತ್ತು ಫೆಬ್ರವರಿ ೧೩ ಸಂಜೆ 5 ಗಂಟೆ 9 ನಿಮಿಷ..ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಶ್ ಫಾರ್ಮಸಿ ಜಂಕ್ಷನ್ ಬಳಿ ಯುವಕನೋರ್ವ ಮೊಬೈಲ್ ಕಸಿದು ಪರಾರಿ ಆಗ್ತಿದ್ದ.ಅಲ್ಲಿದ್ದವರೆಲ್ಲ ಕಳ್ಳ ಕಳ್ಳ ಎಂದು ಕಿರುಚ ತೊಡಗಿದ್ರು..ಅಲ್ಲೇ ಕೆಲಸದ ನಿಮಿತ್ತ ನಿಯೋಜನೆಗೊಂಡಿದ್ದ ಮಹಿಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಕ್ಷಣಕ್ಕೆ ಅಲರ್ಟ್ ಆಗಿ ಕಳ್ಳನನ್ನ ಬೆನ್ನಟ್ಟಿ ಹಿಡಿದಿದ್ರು..ನಂತರ ಅಶೋಕನಗರ ಪೊಲೀಸರಿಗೆ ಒಪ್ಪಿಸಿದ್ರು..ಪೊಲೀಸರ ವಿಚಾರಣೆ ವೇಳೆ ಆತ ಮೊಬೈಲ್ ಕಳ್ಳತನದ ಅಸಲಿ ಸಂಗತಿಯನ್ನ ಬಿಚ್ಚಿಟ್ಟಿದ್ದ
ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಶಾಕ್ ಕೊಟ್ಟ ಸಂಚಾರ ಪೊಲೀಸರು : ಫುಲ್ ವಾಹನಗಳು ಸೀಜ್
ಯೆಸ್..ರಾಯಚೂರು ಮೂಲದ ಈ ಯುವಕ ಓರ್ವ ಯುವತಿಯನ್ನ ಪ್ರೀತಿ ಮಾಡ್ತಿದ್ದ..ಆಕೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಮಾಡ್ತಿದ್ಳು..ಪ್ರೇಯಸಿಗೆ ಪ್ರೇಮಿಗಳ ದಿನದ ಸರ್ಪ್ರೈಸ್ ನೀಡ್ಬೇಕು ಅಂತಾ ಒಂದು ದಿನ ಮುಂಚಿತವಾಗಿಯೇ ಅಂದ್ರೆ ಫೆಬ್ರವರಿ 13 ರಂದು ಕಾಲೇಜು ಬಳಿ ಆಗಮಿಸಿದ್ದ.ಹೀಗೆ ತಲೆಯಲ್ಲಿ ಆಕೆಯ ಮೇಲೆ ಕಲ್ಪನಾ ಲೋಕವನ್ನೇ ಕಟ್ಟಿಕೊಂಡು ಬಂದವನಿಗೆ ಶಾಕ್ ಕಾದಿತ್ತು..ಯಾಕಂದ್ರೆ ತನ್ನರಸಿ ಬೇರೊಬ್ಬ ಯುವಕನೊಂದಿಗೆ ಮಾತನಾಡ್ತಾ ನಿಂತಿದ್ಳು..ಪ್ರಿಯತಮನ ಎದೆಗೆ ಬಾಣ ಬಿಟ್ಟಂತಾಗಿತ್ತು..ಆಕೆ ಕೂಡ ಈ ವೇಳೆ ಗಾಬರಿಗೊಂಡಿದ್ಳು..ಹೀಗಿರ್ಬೇಕಾದ್ರೆ ಮಾತನಾಡ್ತಿದ್ದ ಯುವಕ ಯಾರು ಎಂದು ಪ್ರಿಯತಮೆಯನ್ನ ವಿಚಾರಿಸಿದ್ದ…ಆಕೆ ಜಸ್ಟ್ ಫ್ರೆಂಡ್ ಅಂದುಬಿಟ್ಟಿದ್ಳು..ಆದ್ರೆ ಈತನ ತಲೆಯಲ್ಲಿದ್ದ ಅನುಮಾನ ಮಾತ್ರ ದೂರ ಆಗಿರ್ಲಿಲ್ಲ..ಹಾಗಾಗಿ ಆತನ ಮೊಬೈಲ್ ಕೇಳಿದ್ದ ನನ್ನ ಗರ್ಲ್ಸ್ ಫ್ರೆಂಡ್ ಗೆ ಏನೇನ್ ಮೆಸೆಜ್ ಮಾಡಿದ್ದೀಯ ನೋಡ್ಬೇಕು ಕೊಡು ಅಂತಾ ಮೊಬೈಲ್ ಕಸಿದುಕೊಂಡಿದ್ದ..ಇಷ್ಟಾಗ್ತಿದ್ದಂತೆ ನೋಡಿ ಸಿನಿಮಾ ಶುರುವಾಗೋದು
ಯಾವಾಗ ಮೊಬೈಲ್ ಅನ್ನ ರಾಯಚೂರು ಮೂಲದ ಯುವಕ ಕಿತ್ತುಕೊಂಡ್ನೊ ಪ್ರೇಯಸಿಯ ಸ್ನೇಹಿತನಿಗೂ ಢವ ಢವ ಶುರುವಾಗಿತ್ತು..ಇನ್ನು ಮೊಬೈಲ್ ನೋಡಿದ್ರೆ ಎಲ್ಲ ಬಂಡವಾಳ ಬಯಲಾಗಿಬಿಡುತ್ತೆ ಅಂದುಕೊಂಡ್ನೋ ಏನೊ..ಉಪಾಯ ಮಾಡಿದವ್ನೇ ಕಳ್ಳ ಕಳ್ಳ ಎಂದು ಚೀರಿಬಿಟ್ಟಿದ್ದ…ಪ್ರೇಯಸಿ ಕೂಡ ಕಿರುಚಿಕೊಂಡು ಪೇರಿ ಕಿತ್ತಿದ್ದಳು..ಇದ್ರಿಂದ ಗಾಬರಿ ಗೊಂಡ ಆತ ಮೊಬೈಲ್ ಜೊತೆಗೆ ಓಟ ಕಿತ್ತಿದ್ದ..ಆತನನ್ನ ಮೊಬೈಲ್ ಮಾಲೀಕ ಕೂಡ ಬೆನ್ನು ಬಿದ್ದಿದ್ದ ಇದನ್ನ ನೋಡಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕೂಡ ಓಡಿ ಹೋಗಿ ಆತನನ್ನ ಹಿಡಿದು ಅಶೋಕನಗರ ಪೊಲೀಸರಿಗೆ ಒಪ್ಪಿಸಿದ್ಳು..
ರಾಜಕೀಯಕ್ಕೆ ಎಂಟ್ರಿ ಕೊಟ್ರಾ ಡಾಲಿ ಧನಂಜಯ್: ಪ್ರತಾಪ್ ಸಿಂಹನ ಎದುರು ನಿಲ್ತಾರಾ ?
ಇಲ್ಲಿ ಎಲ್ಲವೂ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಆಗಿದ್ದು ಸರ್ಪ್ರೈಸ್ ಕೊಡಲು ಬಂದವನೇ ಕಳ್ಳ ಎನಿಸಿಕೊಂಡಿದ್ದು ದುರಂತ . ಸದ್ಯ ಅಶೋಕನಗರ ಪೊಲೀಸರು ಇಬ್ಬರನ್ನ ಕರೆಸಿ ಬುದ್ದಿ ಹೇಳಿ ಕಳಿಸಿದ್ದಾರೆ.