ಬೆಂಗಳೂರು: ಸಂಚಾರಿ ಪೊಲೀಸರು ಯಾವಾಗ ಸ್ಪಾಟ್ ಫೈನ್ ಹಾಕೋದನ್ನ ಕಡಿಮೆ ಮಾಡಿದ್ರೊ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋ ಬೈಕ್ ಸವಾರರಿಗೆ ಜಾಲಿನೋ ಜಾಲಿ ತಮಗಿಷ್ಟ ಬಂದ ಹಾಗೆ ಓಡಾಡ್ತಿದ್ದಾರೆ.ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡ್ತಿದ್ದಾರೆ.ಆದರೆ ಅವರ ಅರಿವಿಗೆ ಇಲ್ಲದೆ ಬೈಕ್ ಮೇಲೆ ದಂಡದ ಮೊತ್ತ ಏರಿಕೆ ಆಗ್ತಾ ಹೋಗ್ತಿರುತ್ತೆ ..ಇದೀಗ 50 ಸಾವಿರಕ್ಕು ಅಧಿಕ ಫೈನ್ ಇರೊ ವಾಹನ ಚಾಲಕರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ..
ಹೆಲ್ಮೆಟ್ ಇಲ್ಲದೇ ಓಡಾಡೋದೇನು,ತ್ರಿಬಲ್ ರೈಡಿಂಗ್ ಹೋಗೋದೇನು.ಸಾಲದಕ್ಕೆ ಓನ್ ವೇ ನಲ್ಲೇ ಗಾಡಿ ನುಗ್ಗಿಸೋದೇನು..ಕಾರಿನ ಸೀಟ್ ಬೆಲ್ಟ್ ಹಾಕದೆ ಕೆಲವರು ಬಂದ್ರೆ..ಸಿಗ್ನಲ್ ಜಂಪ್ ಅಂತು ಕಾಮನ್ ಮಾಡಿಕೊಂಡಿದ್ದಾರೆ..ಇಷ್ಟೆಲ್ಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಮ್ಮ ಪೊಲೀಸರು ಸುಮ್ಮನೆ ಬಿಡ್ತಾರಾ ಹೇಳಿ…ಫೈನ್ ಮೇಲೆ ಫೈನ್ ಜಡಿದು ಶಾಕ್ ನೀಡಿದ್ದಾರೆ. ಹೌದು. ಇತ್ತೀಚೆಗೆ ನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಅಧಿಕಗೊಂಡಿದೆ..ಹಾಗಾಗಿ 50 ಸಾವಿರಕ್ಕಿಂತ ಹೆಚ್ಚು ದಂಡವಿರುವ ಸವಾರನ ಮನೆ ಬಾಗಿಲಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡೋದಾಗಿ ಎಚ್ಚರಿಕೆ ಕೊಟ್ಟಿದ್ದ ಸಂಚಾರ ಪೊಲೀಸರು ಅದನ್ನ ಕಾರ್ಯರೂಪಕ್ಕೆ ತಂದಿದ್ದಾರೆ.
ಬೈಕ್ ಬೆಲೆ 60ಸಾವಿರ, ಫೈನ್ ಇರೋದು ಒಂದೂವರೆ ಲಕ್ಷ: ಪೊಲೀಸರ ಕೈಗೆ ಸಿಕ್ಕಿದ್ದೆ ರೋಚಕ!
50 ಸಾವಿರಕ್ಕಿಂತ ಹೆಚ್ಚು ದಂಡವಿರುವ 84 ಬೈಕ್ ಹಾಗೂ ಒಂದು ಕಾರನ್ನ ದಕ್ಷಿಣ ವಿಭಾಗ ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ.. ಈ ವಾಹನಗಳ ಮೇಲೆ 10,210 ಸಾವಿರ ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ..ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕಾ ಕ್ಯಾಮರಗಳಿಂದ ಸೆರೆಯಾಗುವ ಪೋಟೊ ಆಧಾರದ ಮೇರೆಗೆ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗುತ್ತಿದ್ದು, ಪೊಲೀಸರು ಅಡ್ಡಗಟ್ಟುವುದಿಲ್ಲ ಎಂದು ಭಾವಿಸಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು..ಅಂತಹವರಿಗೆ ಈಗ ಶಾಕ್ ಎದುರಾಗಿದೆ.
ಟ್ರಾಫಿಕ್ ವೈಯಲೇಷನ್ ಮಾಡುವವವರ ವಿರುದ್ಧ ಹಾಗೂ ಮುಖ್ಯವಾಗಿ 50 ಸಾವಿರಕ್ಕಿಂತ ಹೆಚ್ಚು ದಂಡ ಹೊಂದಿರುವ ಸವಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ನಗರದ ಎಲ್ಲಾ ವಲಯದ ಡಿಸಿಪಿಗಳಿಗೆ ಸೂಚಿಸಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡ ದಕ್ಷಿಣ ವಿಭಾಗದ ಡಿಸಿಪಿ ಶಿವರಾಜ್ ದೇವರಾಜ್ ನೇತೃತ್ವದ ತಂಡ ಕಳೆದ ಎರಡು-ಮೂರು ದಿನಗಳಿಂದ ಕಾರ್ಯಾಚರಣೆ ಕೈಗೊಂಡು 84 ಬೈಕ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಸೀಜ್ ಮಾಡಲಾದ ಎಲ್ಲಾ ವಾಹನಗಳ ಮೇಲೆ 50 ಸಾವಿರಕ್ಕಿಂತ ಹೆಚ್ಚು ದಂಡವಿರುವುದು ಕಂಡು ಬಂದಿದೆ. ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿದ್ದು 1 ಕೋಟಿ ರೂಪಾಯಿ ದಂಡವಿದೆ. ಸದ್ಯ ಎಲ್ಲಾ ವಾಹನಗಳನ್ನ ಸೀಜ್ ಮಾಡಿ ವಾಹನ ಮಾಲೀಕರಿಗೆ ನೊಟೀಸ್ ಕಳುಹಿಸಲಾಗಿದೆ..ದಂಡ ಕಟ್ಟಿಲ್ಲ ಅಂದ್ರೆ ಚಾರ್ಜ್ ಶೀಟ್ ಸಲ್ಲಿಸಿ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಎಚ್ಚರಿಕೆ ಕೊಟಿದ್ದು. ಆನ್ ಲೈನ್ ಮೂಲಕವೂ ದಂಡ ಕಟ್ಬಬಹುದು ಎಂದಿದ್ದಾರೆ
ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ ಘೋಷಣೆ ಕೂಗುತ್ತಿದ್ದಾರೆ: ಮೋದಿ ಕಿಡಿ!
ಟ್ರಾಫಿಕ್ ಪೊಲೀಸ್ ಇಲ್ಲ ಎಂದು ಅಡ್ಡದಿಡ್ಡಿ ರಸ್ತೆ ಮೇಲೆ ಓಡಾಡೋರು ಹುಷಾರಾಗಿರಿ ಟ್ರಾಫಿಕ್ ಪೊಲೀಸರು ರಸ್ತೆ ಮೇಲೆ ಇಲ್ಲ ಅಂದರು ಮೂರನೇ ಕಣ್ಣು ನಿಮ್ಮ ಮೇಲೆ ನಿಗಾ ಇಟ್ಟಿರುತ್ತೆ…