ಚಂಡೀಗಢ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಡ, ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ (Jai Siya Ram) ಅಂತಾ ಘೋಷಣೆ ಕೂಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೈತರಿಗೆ ಮಧ್ಯದ ಬೆರಳು ತೋರಿಸಿದ ಮಹಿಳೆ – ನೀವು ನನ್ನನ್ನು ಅನುಚಿತ ಸ್ಪರ್ಶಿಸಿದ್ದೀರಿ ಎಂದು ಗಲಾಟೆ !
ಹರ್ಯಾಣದ ರೇವಾರಿಯಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು AIIMS ಸಂಸ್ಥೆಯ ಅಡಿಪಾಯವನ್ನು ಹಾಕಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ನಾನು ಕೊಟ್ಟಿದ್ದ ಕೆಲವೊಂದು ಭರವಸೆಗಳನ್ನು ಈಡೇರಿಸಿದ್ದೇನೆ. ದೇಶವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು (Ram Mandir) ಬಯಸಿತ್ತು. ಅದು ಈಡೇರಿದೆ ಎಂದರು.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಕಾಂಗ್ರೆಸ್ ದಶಕಗಳಿಂದ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಕಿಡಿಕಾರಿದರು. ಭಾರತವು ಇಂದು ವಿಶ್ವದಲ್ಲಿಯೇ ಎತ್ತರದ ಸ್ಥಾನವನ್ನು ಅಲಂಕರಿಸಿದೆ. ಇದು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.