ಕಲಬುರಗಿ: ಸರ್ಕಾರಿ ಶಾಲೆಗಳು ಉಳಿಯಬೇಕು ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಾಗಬೇಕು..ಇಂತಹ ಒಳ್ಳೆಯ ಉದ್ದೇಶ ಇಟ್ಕೊಂಡು ಸ್ವಂತ ಹಣದಲ್ಲಿ ಶಾಲೆಗೆ ಸುಣ್ಣಬಣ್ಣ ಮಾಡಿಸಿ ಶಹಬ್ಬಾಷ್ ಎನ್ನಿಸಿಕೊಂಡ ಶಿಕ್ಷಕರೊಬ್ರು ಕಲಬುರಗಿಯಲ್ಲಿ ಫೇಮಸ್ಸಾಗಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಸಚ್ಚಿದಾನಂದ ಪ್ರೌಢಶಾಲೆ ಶಿಕ್ಷಕ ಸಿದ್ದಲಿಂಗ ಬಾಳಿ ಈ ಮಹತ್ಕಾರ್ಯ ಮಾಡಿದ್ದಾರೆ ತಮ್ಮ ಮಕ್ಕಳ ಜನ್ಮದಿನದ ನಿಮಿತ್ತ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಮಾಡಿಸಿದ್ದಾರೆ.ತಾವಾಯ್ತು ತಮ್ಮ ಸಂಸಾರ ಆಯ್ತು ಅನ್ನೋ ಜನರೇ ತುಂಬಿರುವ ಈ ಜಮಾನದಲ್ಲಿ ರಾವೂರಿನ ಶಿಕ್ಷಕ ಸಿದ್ಧಲಿಂಗ ಮಾಡಿದ ಕಾರ್ಯ ಮೆಚ್ಚಲೇಬೇಕು..