ಚಾಮರಾಜನಗರ:- ತಾಲೂಕಿನ ಹೆಗ್ಗವಾಡಿಪುರದಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹನುಮ ಸಂಜೀವಿನಿ ಔಷಧಾಲಯ, ಓಂಕಾರ್ವರ್ಮಿ ಕಾಂಪೋಸ್ಟ್ ಹಾಗೂ ಸಿಮ್ಸ್ ಆಸ್ಪತ್ರೆಯರಕ್ತನಿಧಿಕೇಂದ್ರ ದಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ.ಎಂ.ಡಿ ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪುಷಾರ್ಚನೆ ಸಲ್ಲಿಸಿ ರೈತಗೀತೆ ಹಾಡಲಾಯಿತು.
ಈ ವೇಳೆಯಲ್ಲಿ ರೈತ ಮುಖಂಡ ಹಾಗೂ ಹಸಿರು ಸೇನೆಯ ಎಚ್ ಸಿ. ಮಹೇಶ್ ಕುಮಾರ್ ಮಾತನಾಡಿ, ರೈತರಿಗೆ ಧ್ವನಿ ಕೊಟ್ಟಂತಹ ಮಹಾನ್ ನಾಯಕ ವಿಶ್ವದಲ್ಲಿ ಯಾರಾದರೂ ಇದ್ದರೆ ಅದು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಇಂದು ಹಲವಾರು ದೇಶಗಳ ರೈತರು ಅವರ ಹೋರಾಟವನ್ನು ಸ್ಮರಿಸುತ್ತಿದ್ದಾರೆ ಎಂದರು. 40 ವರ್ಷಗಳ ಹಿಂದೆಯೇ ಸ್ವಿಸ್ ಬ್ಯಾಂಕ್ನಲ್ಲಿದ್ದ ಕಪ್ಪು ಹಣವನ್ನು ತರಲು ಹೋರಾಟ ನಡೆಸಿದ್ದರು. ಅವರ ತತ್ವ ಸಿದ್ಧಾಂತಗಳು ದೇಶದ ಪ್ರತಿ ಗ್ರಾಮದಲ್ಲಿಯೂ ಇಂದು ಚಿಗುರೊಡೆಯಬೇಕಿದೆ ಎಂದು ಹೇಳಿದರು.
ಇದೇ ವೇಳೆ ಹಲವು ಯುವಕರು ರಕ್ತದಾನ ಮಾಡಿದರು. ಅಲ್ಲದೆ ರೈತ ನಾಯಕನ ನೆನಪಿಗಾಗಿ ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಇ-ಶ್ರಮ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ಆನ್ಲೈನ್ ಸೇವೆಗಳನ್ನು 140 ಜನರಿಗೆ ಒದಗಿಸಲಾಯಿತು. ಜಿಲ್ಲಾ ರೈತ ಸಂಘದ ಅಧ್ಯಕ್ಚ ಶಾಂತಮಲ್ಲಪ್ಪ, ಶ್ರೀಕಂಠಶರ್ಮ, ಶ್ರೀಧರ್. ಡಾ.ಅಮೃತ. ಡಾ. ದಿವ್ಯಾ, ಮಂಗಳಮ್ಮ, ಸರಸ್ವತಿ, ಅಜಯ್ , ಸಿದ್ದಾಪ್ಪಾಜಿ, ಪೂರ್ಣಿಮಾ. ಮಹೇಶ್, ಓಂಕಾರ್ ಮೊದಲಾದವರು ಹಾಜರಿದ್ದರು.