ಬೆಂಗಳೂರು:- ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ವ್ಯಕ್ತಿ ಎಂದು ಕುಮಾರಸ್ವಾಮಿ ಎಂದು ಶಾಸಕ ಹೆಚ್ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ ಹೆಚ್ಸಿ ಬಾಲಕೃಷ್ಣ, ಯುದ್ಧರಂಗದಲ್ಲಿ ಬೆನ್ನು ತೋರಿಸಿ ಓಡಾಡುವ ಜಾಯಮಾನದವರು ನಾವಲ್ಲ. ಯಾವ ಪಾಳೆಗಾರು ಬಂದ್ರೂ ಕುಸ್ತಿ ಮಾಡೋಕೆ ನಾವು ಸಿದ್ಧವಿದ್ದೇವೆ ಎಂದು ಹೇಳಿದರು.
ಡಾ.ಮಂಜುನಾಥ್ ಅವರಿಗೆ ವೈದ್ಯಕೀಯ ರಂಗದಲ್ಲಿ ಗೌರವವಿದೆ. ಆದ್ರೆ ರಾಜಕೀಯ ಬೇರೆ ಅನ್ನೋದು ಡಾಕ್ಟರ್ ಗೆ ಗೊತ್ತಾಗಬೇಕು. ರಾಜಕೀಯಲ್ಲಿ ಏಗೋದು ಅಷ್ಟು ಸುಲಭವಲ್ಲ. ಪಾಪ ಇವರು ಮಂಜುನಾಥ್ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಜುನಾಥ್ ಅವರನ್ನು ಸ್ಪರ್ಧೆಗೆ ಇಳಿಸಲಿ ಅದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ನಾವು ಈಗಗಾಲೇ ಚುನಾವಣೆಯನ್ನು ಮಾಡುತ್ತಿದ್ದೇವೆ. ಈಗಾಗಲೇ ಒಂದು ಹಂತದ ಚುನಾವಣೆ ತಯಾರಿ ನಡೆದಿದೆ. ಎರಡನೇ ಹಂತದ ಚುನಾವಣೆ ತಯಾರಿಯನ್ನು ಸಹ ಆರಂಭಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಅವರೇ ಗೆಲ್ಲೋದು ನಿಶ್ಚಿತ.
ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸವನ್ನು ಮಾಡ್ತಿದ್ದಾರೆ. ಮಂಜುನಾಥ್ ಅವರ ಬದಲಾಗಿ ಕುಮಾರಸ್ವಾಮಿ ಅವರೇ ಇಲ್ಲಿ ಸ್ಪರ್ಧೆ ಮಾಡಲಿ ಎಂದು ಬಾಲಕೃಷ್ಣ ಸವಾಲು ಹಾಕಿದರು.