ಕೋಲ್ಕತಾ:- ಪತಿಯೊಬ್ಬ ಹೆಂಡತಿಯನ್ನು ಹತ್ಯೆಗೈದು ಬಳಿಕ ಆಕೆಯ ರುಂಡದೊಂದಿಗೆ ಅಲೆದಾಡಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಜರುಗಿದೆ.
ಕೂಡಲೇ ಪೊಲೀಸರು ಆರೋಪಿ ಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಗೌತಮ್ ಗುಚ್ಚೈತ್ (40) ಎಂಬಾತನನ್ನ ಚಿಸ್ತಿಪುರ ಬಸ್ ನಿಲ್ದಾಣದ ಬಳಿ ಸ್ಥಳೀಯರು ಗಮನಿಸಿದ್ದಾರೆ. ಅವನು ರಕ್ತದಲ್ಲಿ ತೊಯ್ದು ತನ್ನ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಗುಚ್ಚೈತ್ ಮಾನಸಿಕವಾಗಿ ಅಸ್ಥಿರವಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ತುಂಡರಿಸಿದ್ದಾನೆ ಎನ್ನುವುದು ತಿಳಿದು ಬಂದಿದೆ.
ಗುಚ್ಚೈತ್ನನ್ನು ಬಂಧಿಸಿದ ಪೊಲೀಸರು ಆತನ ಮನೆಯನ್ನು ಹುಡುಕಿ ಹೆಂಡತಿಯ ಶವವನ್ನು ಕಂಡುಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.