ಇದು ಐಎಎಸ್ ಅಧಿಕಾರಿಯಾಗಿ ಪರಿವರ್ತನೆಗೊಂಡ ಮಾಜಿ ಶಸ್ತ್ರಚಿಕಿತ್ಸಕಿ ರೇಣು ರಾಜ್ ಅವರ ಸ್ಪೂರ್ತಿದಾಯಕ ಕಥೆ. ಕೇರಳದ ಕೊಟ್ಟಾಯಂನಿಂದ ಬಂದಿರುವ ರೇಣು ರಾಜ್ ಅವರ ಪಾಲನೆಯು ಮಧ್ಯಮ ವರ್ಗದ ಕುಟುಂಬದಲ್ಲಿ ಶುರುವಾಯಿತು.
ಅವರ ತಂದೆ ಸರ್ಕಾರಿ ಕೆಲಸದಲ್ಲಿ ಇದ್ದರು. ಕೊಟ್ಟಾಯಂನ ಗೌರವಾನ್ವಿತ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆಯುವ ಮೊದಲು ಅವರು ಚಂಗನಾಸ್ಸೆರಿಯ ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು.
ಶಸ್ತ್ರಚಿಕಿತ್ಸಕಿಯಾಗಿ ಅಭ್ಯಾಸ ಮಾಡುತ್ತಿರುವಾಗ, ರೇಣು ರಾಜ್ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ನಿರ್ಧಾರ ಮಾಡಿದರಂತೆ. ಶ್ರದ್ಧೆಯಿಂದ ಪ್ರಯತ್ನ ಮತ್ತು ಸಮರ್ಪಣೆಯೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಅಷ್ಟೇ ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲಿಯೇ 2ನೇ ರ್ಯಾಂಕ್ ಸಹ ಪಡೆದರಂತೆ.
ಸಾರ್ವಜನಿಕ ಸೇವೆಗೆ ರೇಣು ಅವರ ಬದ್ಧತೆಯಿಂದಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ತೊರೆದು ಆಡಳಿತಾತ್ಮಕ ಪಾತ್ರಗಳಿಗಾಗಿ ತಮ್ಮ ಉತ್ಸಾಹವನ್ನು ಮುಂದುವರಿಸಲು ಕಾರಣವಾಯಿತು.
ಮುನ್ನಾರ್ನ ಸುಂದರವಾದ ಗಿರಿಧಾಮದಲ್ಲಿ ಅನಧಿಕೃತ ನಿರ್ಮಾಣಗಳು ಮತ್ತು ಭೂ ಅತಿಕ್ರಮಣಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡದ್ದಕ್ಕಾಗಿ ಇವರು ತುಂಬಾನೇ ಹೆಸರುವಾಸಿಯಾದರು.
ರೇಣು ಅವರಿಗೆ ಐಎಎಸ್ ಅಧಿಕಾರಿಯಾಗುವುದು ಬಾಲ್ಯದ ಕನಸಾಗಿತ್ತಂತೆ. ಪ್ರಸ್ತುತ ವಯನಾಡಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಶ್ರೀರಾಮ್ ವೆಂಕಟರಾಮನ್ ಅವರೊಂದಿಗೆ ವಿವಾಹವಾಗಿದ್ದಾರೆ.
ರೇಣು ಅವರ ವೈಯಕ್ತಿಕ ಜೀವನವು ಸಹ ಐಎಎಸ್ ಅಧಿಕಾರಿ ಟೀನಾ ದಾಬಿ ಅವರಂತೆ ಅನೇಕ ರೀತಿಯ ಏರಿಳಿತಗಳನ್ನು ಕಂಡಿದೆ. ಇದು ಶ್ರೀರಾಮ್ ಅವರ ಮೊದಲ ವಿವಾಹವಾಗಿದೆಯಂತೆ, ರೇಣು ಅವರು ಆರೋಗ್ಯ ವೃತ್ತಿಪರರಾದ ಡಾ. ಭಗತ್ ಎಲ್ ಎಸ್ ಅವರನ್ನು ಈ ಮೊದಲು ವಿವಾಹವಾಗಿದ್ದರಂತೆ, ನಂತರ ಅವರಿಂದ ವಿಚ್ಛೇದನೆ ಪಡೆದರಂತೆ.
ರೇಣು ಮತ್ತು ಶ್ರೀರಾಮ್ ಇಬ್ಬರೂ ನಾಗರಿಕ ಸೇವೆಗಳಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಶ್ರೀರಾಮ್ 2012 ರಲ್ಲಿ ಐಎಎಸ್ ಅಧಿಕಾರಿಯಾದರು ಮತ್ತು ರೇಣು ಅವರು 2014 ರಲ್ಲಿ ಅದೇ ಸಾಧನೆಯನ್ನು ಮಾಡಿದರು. ಅವರ ಕಥೆಯು ಸಮರ್ಪಣೆ ಮತ್ತು ಪರಿಶ್ರಮದ ಶಕ್ತಿಯನ್ನು ತೋರಿಸುತ್ತದೆ.
“ಒಬ್ಬ ವೈದ್ಯೆಯಾಗಿ ನಾನು 50 ಅಥವಾ 100 ರೋಗಿಗಳಿಗೆ ಸಹಾಯ ಮಾಡಬಹುದು, ಆದರೆ ನಾಗರಿಕ ಸೇವಕಳಾಗಿ ತೆಗೆದುಕೊಂಡ ಒಂದು ನಿರ್ಧಾರವು ಸಾವಿರಾರು ಜನರ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸುತ್ತದೆ” ಎಂದು ರೇಣು ಹೇಳಿದ್ದಾರೆ.