ಶಿವಮೊಗ್ಗ:- ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಡ್ಡಿ ಮಾಡಲು ಹಣದ ಆಮೀಷ ತೋರುತ್ತಾರೆ ಎಂದು ಸರ್ಕಾರದ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದಾರೆ.
ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು ಸರ್ಕಾರದ ಮಂತ್ರಿಗಳು ಏನೆಲ್ಲ ಆಮಿಶವೊಡ್ಡುತ್ತಾರೆ, ಹತ್ತಿಪ್ಪತ್ತು ಕೋಟಿ ರೂ. ಮಠಕ್ಕೆ ನೀಡ್ತೀವಿ ಅನ್ನುತ್ತಾರೆ, ಐಷಾರಾಮಿ ಕಾರುಗಳನ್ನು ಕೊಡಿಸುವುದಾಗಿ ಹೇಳುತ್ತಾರೆ, ಅಂಥವರ ಬಗ್ಗೆ ಎಚ್ಚರದಿಂದಿರಬೇಕು ಅಂತ ಹೇಳಿದರು.
ಪ್ರಾಯಶಃ ಇದೇ ಅಂಶವನ್ನು ವೇದಿಕೆ ಮೇಲಿದ್ದ ಮಲ್ಲಿಕರ್ಜುನ ಹೆಸರಿನ ವ್ಯಕ್ತಿ ಹೇಳಿದ್ದರು ಅಂತ ಕಾಣುತ್ತೆ. ಅವರ ಹೇಳಿದ್ದನ್ನು ಉಲ್ಲೇಖಿಸಿದ ಯತ್ನಾಳ್, ಹಿಂದೆ ಇದೇ ಹೋರಾಟ ಹೊಸಪೇಟೆಯಲ್ಲಿ ನಡೆಯುತ್ತಿದ್ದಾಗ ತಮ್ಮದೇ ಸಮುದಾಯದ ಮಂತ್ರಿಯೊಬ್ಬ ಅದನ್ನು ನಿಲ್ಲಿಸಲು ಸ್ವಾಮೀಜಿಗಳಿಗೆ 10 ಕೋಟಿ ರೂ.ಗಳ ಆಮಿಶವೊಡ್ಡಿದ್ದ ಎಂದು ಯತ್ನಾಳ್ ಹೇಳಿದರು. ಆದರೆ ಗುರುಗಳು ಎಷ್ಟೇ ಕೋಟಿ ಕೊಟ್ಟರೂ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಅಂದರು.