ತುಮಕೂರು : ಲೋಕಸಭೆ ಚುನಾವಣೆ ಬೆನ್ನಲ್ಲೇ ತುಮಕೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೆಲ್ಲಬಲ್ಲ ಪ್ರಬಲ ಅಭ್ಯರ್ಥಿಯ ಆಯ್ಕೆ ಸವಾಲಾಗಿದೆ. ಬಿಜೆಪಿಯಿಂದ ಕಣಕ್ಕಿಳಿಯಲು ಮಾಜಿ ಸಚಿವ ವಿ. ಸೋಮಣ್ಣ ಕಸರತ್ತು ನಡೆಸುತ್ತಿರುವುದು ಗುಟ್ಟೇನಲ್ಲ. ಮಾಜಿ ಸಚಿವ ಮಾಧುಸ್ವಾಮಿ ಸ್ಪರ್ಧೆಗೆ ನಾನು ಸಿದ್ಧ ಎಂದಿದ್ದಾರೆ. ಇದರ ಬೆನ್ನಲ್ಲೆ ನನ್ನ ಕೈಗೆ ಸರ್ಕಾರ ಸಿಕ್ಕಿದ್ದರೆ ಉರ್ದು ಮಾಧ್ಯಮ ಶಿಕ್ಷಣವನ್ನೇ ರದ್ದು ಮಾಡುತಿದ್ದೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಎಸ್ಎಲ್ಸಿವರೆಗೂ ಮಾತ್ರ ಉರ್ದು ಮೀಡಿಯಂ ಇರೋದು. ಪಿಯುಸಿ ಮತ್ತು ಡಿಗ್ರಿಯಲ್ಲಿ ಉರ್ದು ಮೀಡಿಯಂ ಇಲ್ಲ. ಉರ್ದು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ನಡೆಸುವವರು ಯಾರೂ ಕೂಡ ಉರ್ದು ಓದಿ ಅತಂತ್ರರಾದ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಿಲ್ಲ.
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ
ಆ ಸಮುದಾಯ ಶೈಕ್ಷಣಿಕವಾಗಿ ವೈಫಲ್ಯ ಅನುಭವಿಸಲು ರಾಜಕಾರಣಿಗಳಾದ ನಾವೇ ಕಾರಣ. ಕೇರಳ ಮತ್ತು ತಮಿಳುನಾಡಿನಲ್ಲಿ ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದಿದ್ದಾರೆ. ಕಾರಣ ಆಯಾ ರಾಜ್ಯದ ಭಾಷೆಯಲ್ಲಿ ಅವರು ಶಿಕ್ಷಣ ಕಲಿತು ಮುಂದೆ ಬಂದಿದ್ದಾರೆ. ನಮ್ಮ ರಾಜಕೀಯ ಚಟಕ್ಕೆ ನಾವು ಉರ್ದು ಮೀಡಿಯಂ ಸ್ಕೂಲ್ ಅನ್ನು ಕೊಡುತ್ತಿದ್ದೇವೆ. ಆದರೆ, ಅವರ ಮೂಲ ಸಮಸ್ಯೆಯನ್ನು ನಾವು ಅರಿಯೋದೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.