ಸುಮಾರು 50 ವರ್ಷಗಳಿಂದ ರೈತರ ಜೀವದ ಜೊತೆ ಆಟವಾಡಿ ಕಾನೂನು ನಿಯಮಗಳನ್ನು ಗಾಳಿಗೆ ತೂರುತ್ತಾ ಬಂದಿರುವ ಬಾಗಲಕೋಟ ಜಿಲ್ಲೆಯ ಸೋಮಯ್ಯ ಶುಗರ್ಸ್ ಬಾರಿ ಯಡವಟ್ಟು ಮಾಡಿಕೊಂಡಿದೆ ಹೌದು ಬೆಳಗಾವಿ ಹಾಗೂ ಬಾಗಲಕೋಟ ಗಡಿಯಲ್ಲಿರುವ ಈ ಕಾರ್ಖಾನೆಯ ಹೋಗೆ ಹಾಗೂ ದೂಳಿನಿಂದ ರೈತರು ಅಕ್ಷಶಾಹ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.
ಪಾಕ್ಟರಿಯ ತಾಜ್ಯ ನೀರು ಕಾಲುವೆಗಳಿಗೆ ಬಿಡುವದರಿಂದ ಹಾಗೂ ಸಂಗ್ರಹವಾದ ನಿರಿಂದ ಕೊಳವೆ ಭಾವಿಗಳಲ್ಲಿ ಗಡಸು ಮಾಲಿನ್ಯ ನೀರು ತುಂಬಿದ್ದು ಕುಡಿಯಲು ಕೂಡ ಯೋಗ್ಯವಲ್ಲದ ನೀರಿನಿಂದ ಜನರು ತತ್ತರಗೊಂಡಿದ್ದಾರೆ. ಪ್ರಾಣಿಗಳು ಈ ನೀರು ಸೇವನೆ ಮಾಡುವದರಿಂದ ಮೃತಪಟ್ಟ ಘಟನೆಗಳು ಸಹ ಜಿವಂತವಾಗಿವೆ ಹಾಗೂ ಪ್ರಾಣಿಗಳ ಗರ್ಭದಾರಣೆ ಕುಂಟಿತವಾಗಿ ಜಲಚರ ಜೀವಿಗಳು ಕೂಡ ಬದುಕಲು ಸಾಧ್ಯವಾಗುತ್ತಿಲ್ಲ
ರೈತರ ಬೆಳೆಗಳ ಮೇಲೆ ರಾಸಾಯನಿಕ ದೂಳು ಗಾಳಿಯ ಮುಕಾಂತರ ಬಂದು ಕೊಡ್ರುವದರಿಂದ ಬೆಳೆಯಲು ಬೆಳೆಯುತ್ತಿಲ್ಲ, ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ವೀಳ್ಯದೆಲೆ, ತರಕಾರಿ ಬೆಳೆಗಳು ಪ್ರಮುಖವಾಗಿರುವ ಬೆಳಗಾವಿ ಜಿಲ್ಲೆಯ ಮುರಾಕುಡಿ ಕಪ್ಪಲಗುದ್ದಿ ಹಂದಿಗುಂದ ನೀರಲಕೋಡಿ ಗ್ರಾಮದ ರೈತರು ಬಾರಿ ನಷ್ಟ ಅನುಭವಿಸುತ್ತಿದ್ದರೂ ಯಾವೊಬ್ಬ ಮಾಲಿನ್ಯ ನಿಯಂತ್ರಣ, ಹಾಗೂ ಪರಿಸರ ಅಧಿಕಾರಿಗಳು, ತೋಟಗಾರಿಕಾ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ,
ಇಂತಹ ನೀರನ್ನು ಬೆಳೆಗೆ ಬಿಡುವದರಿಂದ ಬೆಳೆಗಳು ಫಲ ಕೊಡದೆ ರೈತರ ಕಣ್ಣೀರಿಗೆ ಕಾರಣವಾಗಿದೆ, ಈ ಗಡಸು ನಿರಿಂದ ಕೊಳವೆ ಬಾವಿ ಹಾಗೂ ಕೃಷಿಹೊಂಡಕ್ಕೆ ಅಳವಡಿಸಿದ ಮೋಟಾರಗಳು ಒಂದೇ ತಿಂಗಳಲ್ಲಿ ಹಾಳಾಗುತ್ತಾ ಹೋಗುತ್ತಿವೆ, ಒಂದು ಕಡೆ ಕುಡಿಯುವ ನೀರಿನ ಅಭಾವ, ಇನ್ನೊಂದು ಕಡೆ ಪ್ರಾಣಿಗಳ ಮಾರಣಹೋಮ, ಇನ್ನೊಂದು ಕಡೆ ರೈತರ ಬೆಳೆ ನಾಶ ಇದೆಲ್ಲದರ ಮದ್ಯ ಬದುಕು ಕಟ್ಟಿಕೊಳ್ಳುವದಾದರೂ ಹೇಗೆ ಎಂಬ ಪ್ರಶ್ನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾವಿರ ಬಾರಿ ಪೋನಯಿಸಿದರು, ಕಚೇರಿಗೆ ಅಲೆದು ಅಲೆದು ಸಾಕಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ನೇಣಿಗೆ ಶರಣಾಗುವ ಪರಿಸ್ಥಿತಿ ಇದೆ
ಹಠ ಬಿಡದ ರೈತರು ಸ್ಥಳಕ್ಕೆ ಆಗಮಿಸಿ: ಪರಿವಿಕ್ಷನೆಯಲ್ಲಿ ಹೈರಾಣಾದ ಅಧಿಕಾರಿಗಳು
ಕೊನೆಗೆ ದಿನಾಂಕ 13-2-2024 ರಂದು ರೈತರ ಹಠಬಿಡದ ಪ್ರಯತ್ನದಿಂದ ಬಾಗಲಕೋಟ ಬೆಳಗಾವಿ ಚಿಕ್ಕೋಡಿ ವಿಭಾಗದ ಅಧಿಕಾರಿಗಳನ್ನು ಕರೆಯಿಸಿದ ರೈತರು ಅಧಿಕಾರಿಗಳ ವಿರುದ್ಧ ಹರಿಹಯಿದರೆ ಮತ್ತೊಂದು ಕಡೆ ತಮ್ಮ ನೋವನ್ನು ವ್ಯಕ್ತಪಡಿಸಿ ಸರಿಯಾದ ಕ್ರಮವಹಿಸಬೇಕು ಎಂದು ಪಟ್ಟ ಹಿಡಿದರು, ನೀವು ಕಾರ್ಖಾನೆಗಳ ಪರವಾಗಿ ಕೆಲಸ ಮಾಡುತ್ತಿದ್ದೀರಿ ರೈತರ ಬೆವರಿಗೆ ಬೆಲೆ ಇಲ್ಲದಂತಾಗಿದೆ ನಾವಿಲ್ಲ ಜೀವವನ್ನು ಕೈಯಲ್ಲಿದೆ ಹಿಡಿದುಕೊಂಡು ಓಡಾಡುತ್ತ ಇದ್ದೇವೆ ನೀವು ಮಾತ್ರ AC ರೂಮಲ್ಲಿ ಕಾಲ ಕಳಿತಾ ಇದ್ದೀರಾ ಎಂದು ರೈತರು
ಆಕ್ರೋಶ ವ್ಯಕ್ತಪಡಿಸಿದರು, ಕೊನೆಗೆ ಅಧಿಕಾರಿಗಳು ಗದ್ದೆಗಳಲ್ಲಿಯೇ ಸಂಚಾರ ಮಾಡುತ್ತ ಪ್ರತಿ ಮಾಹಿತಿ ಸಂಗ್ರಹಿಸುತ್ತ ನಾವು ಎಲ್ಲವನ್ನು ರಿಪೋಟ್ ಮಾಡ್ತೀವಿ ಎರಡು ದಿನದಲ್ಲಿ ನಿಮಗೆ ತಿಳಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು ಏನೇಯಾಗಲಿ ರೈತರ ಬದುಕಿಗೊಂದು ನೆಮ್ಮದಿ ಸಿಗಲಿ, ಕಾರ್ಕಾನೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ರೈತರ ನೆರವಿಗೆ ನಿಲ್ಲುತ್ತರಾ ಅನ್ನೋದನ್ನ ಕಾದು ನೋಡಬೇಕಾಗಿದೆ
ವರದಿ : ಎಂ. ಕೆ. ಸಪ್ತಸಾಗರ