ಬೆಂಗಳೂರು:- ಸ್ನೇಹಿತ ಸಾಲ ವಾಪಸ್ ನೀಡಿಲ್ಲ ಎಂದು ವ್ಯಕ್ತಿಯೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯ ಸುಂಕದಕಟ್ಟೆ ಪೈಪ್ ಲೈನ್ ಬಳಿ ಘಟನೆ ಜರುಗಿದೆ.
ವಿಷ ಕುಡಿದು 40 ವರ್ಷದ ನಂಜುಡಸ್ವಾಮಿ ಸಾವನ್ನಪ್ಪಿದ ವ್ಯಕ್ತಿ. ನಂಜುಂಡಗೌಡ , ನಂಜುಂಡಸ್ವಾಮಿಗೆ ಹಣ ನೀಡಬೇಕಿತ್ತು. ಇತ್ತೀಚೆಗೆ ಹಣ ನೀಡದೆ ಸತಾಯಿಸುತ್ತಿದ್ದ. ಇದ್ರಿಂದ ಬೇಸತ್ತು ಇಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.