ಚಿಕ್ಕೋಡಿ:ನಿದ್ರೆಗೆ ಜಾರಿದ ಗ್ರಾಮ ಲೆಕ್ಕಧಿಕಾರಿ ಸಿದ್ದು ಹತ್ತರಕಿ ಹೌದು ರಾಯಭಾಗ ತಾಲೂಕಿನ ಮುಗಳಖೊಡ ಗ್ರಾಮ ಲೆಕ್ಕಧಿಕಾರಿ ಅಕ್ಷರಶ ಚಿರನಿದ್ರೆಗೆ ಜಾರಿದಂತಿದೆ ಯಾಕೆ ಅಂತೀರಾ ಈ ಸ್ಟೋರಿ ನೋಡಿ ಮುಗಳಖೊಡ ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಕಡೆ ಸಾರ್ವಜನಿಕ ಸರ್ಕಾರಿ ಜಾಗವಿದೆ ಆದ್ರೆ ಅದು ಕೆಲ ಬಲಿಷ್ಠ ಕೈಗಳ ಮುಷ್ಟಿಯಲ್ಲಿದ್ದಂತೆ ಕಾಣುತ್ತಿದೆ,
ಸಾರ್ವಜನಿಕ ಸರ್ಕಾರಿ ಜಾಗೆಯನ್ನು ಹಲವಾರು ಜನರು ತಮ್ಮ ಸ್ವಂತ ಜಾಗೆ ಎಂಬಂತೆ ಬಳಕೆ ಮಾಡುತ್ತಿದ್ದರೂ ತಮಗೆ ಏನು ಸಂಬಂಧ ಇಲ್ಲಾ ಅಂಬಂತೆ ವರ್ತನೆ ಮಾಡುತ್ತಿದ್ದಾರೆ ಈ ಗ್ರಾಮ ಲೆಕ್ಕಧಿಕಾರಿ
ಸಾರ್ವಜನಿಕ ಜಾಗದ ಕುರಿತು ಸಾಕಷ್ಟು ಬಾರಿ ಸಿದ್ದು ಹತ್ತರಕಿ ತಲಾಟಿಯವರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗುತ್ತಿಲ್ಲ ಅನ್ನೋದು ವಿಪರ್ಯಾಸ ಸಂಗತಿಯಾಗಿದೆ ಸರ್ಕಾರಿ ಜಾಗೆಯಲ್ಲಿ ಬಲಿಷ್ಠ ಕೈಗಳು ಅರಿಶಿನ ಒಣಗಿಸಲು ಬಳಸುತ್ತಿದ್ದಾರೆ ಇದರಿಂದ ಹಲವಾರು ಕಡೆಗಳಲ್ಲಿ ರಸ್ತೆ ಬಂದ ಕೂಡ ಆಗಿದೆ.
ಪಟ್ಟಣದ ಪ್ರಮುಖ ರಸ್ತೆಗಳು ಪಕ್ಕ ಕೂಡ ಅರಿಸಿನ ಒಣಗಿಸುತ್ತಿರುವದರಿಂದ ಸಂಚಾರಕ್ಕೆ ತೊಂದ್ರೆ ಆಗುತ್ತಿದೆ. ಈ ಜ್ವಲಂತ ಸಮಸ್ಸೆ ಮುಂದಿನ ದಿನಮಾನದಲ್ಲಿ ಅನಾಹುತಗಳಿಗೆ ಕಾರಣವಾಗಬಹುದು ಸಮಸ್ಸೆ ಸರಿಪಡಿಸಿ ಅಂತಾ ವಿನಂತಿಸಿದರು ತಲಾಟಿ ಕ್ರಮಕೈಗೊಳ್ಳದಿರುವದು ನಾಚಿಕೆಗೇಡಿನ ಸಂಗತಿ, ಸಿದ್ದು ಹತ್ತರಕಿಯವರಿಗೆ ಬಲಿಷ್ಠ ಕೈಗಳ ಮಹಾಲಂಚ ಪ್ರಸಾದ ಏನಾದರು ದೊರಕಿರಬಹುದೇ ಅನ್ನೋ ಅನುಮಾನ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಏನಾದರು ಅನಾಹುತಗಳಾದರೆ ನೇರ ಹೊಣೆಗಾರರು ತಲಾಟಿ ಸಿದ್ದು ಹತ್ತರಕಿ ಅವರೇ ಆಗುವದು ಎಂದು ಸಾರ್ವಜನಿಕರು ಅಗ್ರಹ ಮಾಡಿದ್ದಾರೆ. ಅನಾಹುತ ಸಂಭವಿಸುವ ಮುನ್ನನೇ ವ್ಯವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.
ವರದಿ : ಎಂ. ಕೆ. ಸಪ್ತಸಾಗರ