ಮುಂಬೈ:- ಅಯೋಧ್ಯೆಗೆ ತೆರಳುತ್ತಿದ್ದ ಆಸ್ತಾ ವಿಶೇಷ ರೈಲಿಗೆ ಮಹಾರಾಷ್ಟ್ರದ ನಂದೂರ್ಬಾರ್ ಬಳಿ ಕಲ್ಲು ತೂರಾಟ ನಡೆದಿದೆ. ಭಾನುವಾರ ತಡರಾತ್ರಿ ಈ ಘಟನೆ ಜರುಗಿದೆ
ವಿಶೇಷ ರೈಲಿಗೆ ಭಾನುವಾರ ರಾತ್ರಿ 8 ಗಂಟೆಗೆ ಚಾಲನೆ ನೀಡಲಾಗಿತ್ತು. ಒಟ್ಟು 1,340 ಪ್ರಯಾಣಿಕರಿದ್ದರು ರೈಲಿನಲ್ಲಿದ್ದರು. ರಾತ್ರಿ 10:45 ಕ್ಕೆ ನಂದೂರ್ಬಾರ್ ಬಳಿ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ
ದಾಳಿಯ ಸಮಯದಲ್ಲಿ ಕೆಲವು ಪ್ರಯಾಣಿಕರು ತಕ್ಷಣ ಎಚ್ಚೆತ್ತು ಕಿಟಕಿಯ ಗಾಜನ್ನು ಮುಚ್ಚಿದ್ದಾರೆ. ಆದರೂ ಕೆಲವು ಕಲ್ಲುಗಳು ಕೋಚ್ನೊಳಗೆ ನುಗ್ಗಿವೆ ಎಂದು ನಂದೂರ್ಬಾರ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಸಂಜಯ್ ಮಹಾಜನ್ ತಿಳಿಸಿದ್ದಾರೆ.
ನಂದೂರ್ಬಾರ್ ರೈಲ್ವೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಹಾಜನ್ ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಡರಾತ್ರಿ ನಂದೂರ್ಬಾರ್ ರೈಲು ನಿಲ್ದಾಣದಿಂದ ರೈಲನ್ನು ಕಳುಹಿಸಿದ್ದಾರೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.