ಬಾಗಲಕೋಟೆ:- ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಿದ್ಯುತ್ ತಂತಿಗೆ ತಗುಲಿ ಕಿಡಿ ಹೊತ್ತಿದ್ದು, ಕಿಡಿಯಿಂದ ಮೂರು ಮನೆಗಳಿಗೆ ಬೆಂಕಿಗಾಹುತಿಯಾಗಿದೆ.
ಮನೆಯ ಎಲ್ಲಾ ವಸ್ತುಗಳು, ಹಣ ಬಂಗಾರ ಸುಟ್ಟು ಕರಕಲಾಗಿದ್ದು, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ
ಹನಗಂಡಿ ಗ್ರಾಮದ ಸರದಾರ ಗುಡ್ಡ ಪ್ರದೇಶದಲ್ಲಿ ಘಟನೆ ಜರುಗಿದೆ
ತಿಪ್ಪಣ್ಣ ಪುಟಾಣಿ, ಸಿದ್ರಾಮ ಕಿತ್ತೂರ. ಗಂಗಪ್ಪ ಕಿತ್ತೂರು ಎಂಬುವರ ತಗಡಿನ ಶೆಡ್ ಮನೆಗಳಿಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಬಕವಿ ಬನಹಟ್ಟಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಪ್ರಕಾಶ ಕುಂಬಾರ
ಬಾಗಲಕೋಟೆ