ಚಾಮರಾಜನಗರ:- ಕುರಿಗಾಹಿಗಳ ಮೇಲೆ ಹುಲಿ ಎರಗಿದ ಪರಿಣಾಮ ಇಬ್ಬರಿಗೆ ಗಾಯವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಶಿವಪುರ ಗ್ರಾಮದ ಜವರಶೆಟ್ಟಿ, ಶಿವಶೆಟ್ಟಿ ಎಂಬ ಕುರಿಗಾಹಿಗಳ ಮೇಲೆ ಹುಲಿ ದಾಳಿ ನಡೆದಿದ್ದು, ಬಂಡೀಪುರ ಹುಲಿಸಂರಕ್ಷಿತಾ ಪ್ರದೇಶದ ಶಿವಪುರ ಗ್ರಾಮದಲ್ಲಿ ಘಟನೆ ಜರುಗಿದೆ.
ಕುರಿಗಾಹಿಗಳ ಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿ ಹುಲಿ ಗಾಯಗೊಳಿಸಿದೆ. ಹುಲಿ ಬಾಯಿಂದ ಮೇಕೆ ಬಚಾವ್ ಮಾಡಲು ಮುಂದಾದ ವೇಳೆ ಹುಲಿ ದಾಳಿ ಮಾಡಿದೆ.
ಇಬ್ಬರಿಗೂ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.