ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೆ ವಿಭಜನೆ ಚರ್ಚೆಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬಿಬಿಎಂಪಿ ಹೋಳವಾಗುವ ಚರ್ಚೆ ಪಾಲಿಕೆ ವಿಭಜನೆ ದೃಷ್ಟಿಯಿಂದ ಬಿಜೆಪಿ ರಚಿಸಿದ್ದ ಸಮಿತಿ ಜೊತೆ ಪಾಲಿಕೆ ಮತ್ತೆ ಸಭೆ
ಬಿಬಿಎಂಪಿ ಇಬ್ಬಾಗ ಮಾಡುತ್ತ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದಲ್ಲಿ ಬಿಬಿಎಂಪಿ ವಿಭಜನೆಗಾಗಿ ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ನಗರ ಯೋಜನಾ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ನಂತರ ವಿಧಾನಸಭೆ ಚುನಾವಣೆ ಹಾಗೂ ಕಾಂಗ್ರೆಸ್ ನಾಯಕರು ವಿರೋಧಕ್ಕೆ ಈ ಯೋಜನೆಯನ್ನು ಕೈಬಿಡಲಾಗಿತ್ತು.ಅದರೀಗ ಅದೇ ಕಾಂಗ್ರೆಸ್ ಸರ್ಕಾರ ಈ ಸಮಿತಿಗೆ ಮರು ಜೀವ ಕೊಡೋಕೆ ಮುಂದಾಗುವ ಸಂಭವಿದೆ.
ಮೊದಲು ಬಿಬಿಎಂಪಿಯನ್ನು ಆಡಳಿತಾತ್ಮಕ ಸುಧಾರಣೆಯ ಬಗ್ಗೆ ವರದಿ ಕೊಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸೂಚಿಸಿದ್ದಾರೆಬಿಜೆಪಿ ಅವಧಿಯಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೆಸ್ ಈಗ ಆಡಳಿತಾತ್ಮಕ ಸುಧಾರಣೆ ಎಂದು ಮತ್ತೆ ವಿಭಜನೆ ಸಮಿತಿ ಜೊತೆ ಸಭೆ ನಡೆಸಿ ಕಾರ್ಯಸಾಧ್ಯತೆಯ ವರದಿ ಕೊಡುವಂತೆ ಸೂಚಿಸಿದೆ.
ಕಳೆದ ಅವಧಿಯಲ್ಲಿ ಲಂಡನ್ ಮಾದರಿಯಲ್ಲಿ ಬೆಂಗಳೂರು ಅಧಿಕಾರ ವಿಭಜಿಸಿದರೆ ಉತ್ತಮ ಎಂಬ ವಾದ ಬಂದಿತ್ತು. ಬೆಸ್ಕಾಂ, ಜಲಮಂಡಳಿ ಸೇರಿದ ನಗರದ ಎಲ್ಲಾ ಇತರೆ ಸಂಸ್ಥೆಗಳನ್ನೂ ವಲಯವಾರು ವಿಂಗಡಿಸಿಪ್ರತಿ ಕಮಷಿನರೇಟ್ ಜೊತೆ ವಿಲೀನಗೊಳಿಸಬೇಕು ಎನ್ನುವ ಅಭಿಪ್ರಾಯವೂ ತಜ್ಞರು ಮಂಡಿಸಿದ್ದರು. ವಾರ್ಡ್ ಗಳ ಸಂಖ್ಯೆ 400ಕ್ಕೂ ಅಧಿಕ ಹಾಗೂ ವಲಯಗಳೇ ಇದ್ದರೆ 12 ರಿಂದ 15 ವಲಯಗಳಾಗಿಸಬೇಕು ಎನ್ನುವುದಿತ್ತು.
ವಿಧಾನಸಭೆ ಚುನಾವಣೆ ಹಾಗೂ ಕೈ ವಿರೋಧಕ್ಕೆ ಮಣಿದಿದ್ದ ಬಿಜೆಪಿ ಇದನ್ನು ಕಾರ್ಯಾರೂಪಕ್ಕೆ ತಂದಿರಲಿಲ್ಲ. ಕಾಂಗ್ರೆಸ್ ಇದರ ಬಗ್ಗೆ ಆಸಕ್ತಿ ತೋರಿರುವುದರ ಬಗ್ಗೆ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ವ್ಯಂಗ್ಯವಾಡಿದ್ದಾರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಅಂಟಿಕೊಂಡಿರುವ ಪ್ರದೇಶಗಳೂ ಕೂಡ ಸಿಲಿಕಾನ್ ಸಿಟಿ ವ್ಯಾಪ್ತಿಗೆ ಸೇರಿಕೊಳ್ಳಲಿದೆ.
ಹೀಗಾಗಿ ಬೆಂಗಳೂರನ್ನು ದೆಹಲಿಯಂತೆ ಗ್ರೇಟರ್ ಎಂಬ ಹೆಸರಿನೊಂದಿಗೆ ಗುರುತಿಸಬೇಕು ಎನ್ನುವ ಅಭಿಪ್ರಾಯವೂ ನಗರ ತಜ್ಞರಿಗಿದೆ.