ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮಾಜಿ ಸಿಎಂ HDK ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಸರ್ಕಾರ ಹೇಳುತ್ತೆ ಆದ್ರೆ ಜನ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೆ ಪರದಾಡ್ತಿದ್ದಾರೆ ಗ್ಯಾರಂಟಿ ಯೋಜನೆಯಿಂದ ಕೆಲವು ಕುಟುಂಬಗಳು ಬೀದಿಪಾಲಾಗ್ತಿವೆ ಎಂದು ಕಿಡಿಕಾರಿದರು.
Breaking: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ!
ಹಾಗೆ ಸಹೋದರ ಹೆಚ್.ಡಿ.ರೇವಣ್ಣ ಸ್ವಲ್ಪ ದುಡುಕಿನ ಸ್ವಭಾವದವರು ಹಾಗಾಗಿ ರೇವಣ್ಣ ಬೇಗ ಜನರ ವಿರೋಧ ಕಟ್ಟಿಕೊಳ್ತಾರೆ. ತಮ್ಮ ದುಡುಕಿನ ಸ್ವಭಾವದಿಂದ ಜನರ ವಿರೋಧ ಕಟ್ಟಿಕೊಳ್ತಾರೆ ದೇವೇಗೌರಿಗೆ ಬೆನ್ನೆಲುಬಾಗಿ ನಿಂತು ರೇವಣ್ಣ ಬೆಳೆದಿದ್ದಾರೆ.
ಆದ್ರೆ ರೇವಣ್ಣ ಮಾಡಿರುವ ಅಭಿವೃದ್ಧಿ ಕೆಲಸ ಕಡಿಮೆಯೇನೂ ಇಲ್ಲ ನಮ್ಮಿಂದ ಯಾರಿಗಾದ್ರೂ ನೋವಾಗಿದ್ದರೆ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಕೆಲವು ಘಟನೆಗಳು ನಡೆದು ಹೋಗಿವೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದಂತೆ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.
ರಾಜಕೀಯ ಜೀವನದಲ್ಲಿ ದೇವೇಗೌಡರಿಗೆ ಅಧಿಕಾರ ಸಿಕ್ಕಿದ್ದು ಕಡಿಮೆ ದೇವೇಗೌಡರು ಅಧಿಕಾರ ನೋಡಿದ್ದು ಕೇವಲ ಮೂರ್ನಾಲ್ಕು ವರ್ಷ ಕನಿಷ್ಠ 5 ವರ್ಷ ಅವಕಾಶ ಸಿಕ್ಕಿದ್ರೂ ಅಭಿವೃದ್ಧಿ ಆಗುತ್ತಿತ್ತು ಎಂದು ಹೇಳಿದರು.