ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಹೊಂದಿ ಮೊದಲ ಮೇಯರ ಉಪಮೇಯರ ಅಧಿಕಾರದ ನಂತರ ಎರಡನೆ ಅವಧಿಯ ಮೇಯರ ಉಪಮೇಯರ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧೀಕೃತ ಅಭ್ಯರ್ಥಿಯಾಗಿ ವಾರ್ಡ ಸಂಖ್ಯೆ 54ರಿಂದ ಆಯ್ಕೆಯಾಗಿದ್ದ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿಯವರು ಪಕ್ಷ ಜಾರಿ ಮಾಡಿದ ವಿಪ್ ಉಲ್ಲಂಘಿಸಿ ಮೇಯರ ಉಪಮೇಯರ ಚುನಾವಣೆ ಸಂದರ್ಭದಲ್ಲಿ ಭಾಗವಹಿಸದೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು .
ಸದರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ಸಂಜಯ ಕಪಟಕರ ಅವರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿ ವಿರುದ್ದ ಕ್ರಮ ಜರುಗಿಸಲು ಆಗ್ರಹಿಸಿದ್ದರು.ಉನ್ನತ ತನಿಖೆನಡೆಸಿದ ಪ್ರಾದೇಶಿಕ ಆಯುಕ್ತರು,
ಎಸ ಬಿ ಶೆಟ್ಟೆಣ್ಣವರ ಇಂದು ಆದೇಶ ನೀಡಿ ಕರ್ನಾಟಕ ಸ್ಥಳಿಯ ಪ್ರಾಧಿಕಾರದ ಪಕ್ಷಾಂತರ ಕಾಯ್ದೆಯಡಿ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿಯವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಸಾಬೀತಾಗಿದ್ದು ತಕ್ಷಣವೆ ಅವರನ್ನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಆದೇಶಿಸಿದ್ದಾರೆ. ಈ ಬೆಳವಣಿಗೆ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಎಚ್ಚೆರಿಕೆ ಘಂಟೆಯಾಗಿದೆ.