ಚಾಮರಾಜನಗರ:– ದೇಶದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಕೆ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ದೇಶ ಭಾಗ ಮಾಡಬೇಕು ಎಂದು ಡಿಕೆ ಸುರೇಶ್ ಹೇಳಿಲ್ಲ. ಮಲತಾಯಿ ಧೋರಣೆ ತೋರಿದ್ರೆ ಪ್ರತ್ಯೇಕ ರಾಷ್ಟ್ರ ಮಾಡಬೇಕೆಂದು ಕೇಳಬೇಕಾಗುತ್ತೆಂದು ಹೇಳಿದ್ದಾರೆ. ಪ್ರತ್ಯೇಕ ರಾಷ್ಟ್ರ ಅವರು ಕೇಳ್ತಿಲ್ಲ. ಇದನ್ನು ಬಿಜೆಪಿ ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ಅವರಿಗೆ ಬೇರೆ ವಿಚಾರಯಿಲ್ಲ,ಇದನ್ನು ವಿವಾದ ಮಾಡ್ತಿದ್ದಾರೆ. ಚುನಾವಣೆ ಬಂತು ಎಂದು ಇದನ್ನು ಮಾಡ್ತಿದ್ದಾರೆ ಎಂದರು.
ಕರ್ನಾಟಕದ ಮಾನ ಹರಾಜು ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಮಾತನಾಡಿ, ನೀವೂ ಮಾಜಿ ಸಿಎಂ, ಬಿಜೆಪಿ ದೊಡ್ಡ ನಾಯಕರು. ನಿಮ್ಮ ಯೋಗ್ಯತೆಗೆ ಬರಗಾಲವಿದೆ ಹಣ ಬಿಡುಗಡೆ ಅಂತಾ ಒಂದು ಸ್ಟೇಟ್ ಮೆಂಟ್ ಮಾಡಿಲ್ಲ. ಅವರದೆ ಸರ್ಕಾರ,ಆ ಪಕ್ಷದ ದೊಡ್ಡ ಲೀಡರ್ ಇವರು. ಬರಗಾಲವಿದೆ,ಜನರು ಕಷ್ಟದಲ್ಲಿದ್ದಾರೆ ಹಣ ಬಿಡುಗಡೆ ಮಾಡಬಹುದಿತ್ತೆಂದು ಹೇಳಬಹುದಿತ್ತು ಎಂದರು.
ಅಮಿತ್ ಶಾ ರಿಂದ ಸಿಎಎ ಜಾರಿ ವಿಚಾರವಾಗಿ ಮಾತನಾಡಿ, ಇದು ಚುನಾವಣಾ ಸ್ಟಂಟ್! ಚುನಾವಣೆ ಬಂದಾಗ ಇದನ್ನೇಲ್ಲಾ ಹೇಳ್ತಾರೆ. ಮೋದಿ ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು ಹಾಕಿದ್ರಾ?. ನಿರುದ್ಯೋಗಿಗಳಿಗೆ ಕೆಲಸ ಕೊಡ್ತೀವಿ ಎಂದಿದ್ರು,ಕೊಟ್ರಾ? ಇದೆಲ್ಲಾ ಎಲೆಕ್ಷನ್ ಸ್ಟಂಟ್ ಎಂದು ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.